ದಲಿತ ಚಿಂತನೆಗಳು

ದಲಿತ ಚಿಂತನೆಗಳು

Share

ಪ್ರಜ್ಞಾವಂತ ಪ್ರಗತಿಪರ ದಲಿತ ಚಿಂತಕರ ಕ್ರಾಂತಿಕಾರಿ ವೇದಿಕೆ

20/04/2024

ಈ ಬಾರಿಯ ಲೋಕಸಭಾ ಚುನಾವಣೆ, ಅತ್ಯಂತ ಪ್ರಮುಖ ಹಾಗೂ ಹಿಂದೆಲ್ಲಾ ಚುನಾವಣೆಗಳಿಗಿಂತ ವಿಭಿನ್ನ.

ಅದರಲ್ಲೂ, ಕೋಲಾರದ ರಾಜಕೀಯ, ಇನ್ನೊಂದು ಹಂತಕ್ಕೊಗಿದೆ.

ಈ ಬಾರಿ ಲೋಕ ಸಮರ,
ಸಂವಿಧಾನವನ್ನು ಬದಲಾಯಿಸುವ ಸಂಕಲ್ಪತೊಟ್ಟ ಬಿಜೆಪಿ (ಕೆಲ ನಾಯಕರು ನೇರ ನೇರವಾಗಿಯೇ ಸ್ಟೇಜ್'ಗಳ ಮೇಲೆ ಹೇಳಿದ್ದಾರೆ) ಮತ್ತು ಸಂವಿಧಾನ ಉಳಿಸುವುದೇ ನಮ್ಮ ಗುರಿ ಎಂದು ಆಶ್ವಾಸನೆ ಕೊಟ್ಟಿರುವ ಕಾಂಗ್ರೆಸ್ ನ ನಡುವೆ.

ಕೋಲಾರದಲ್ಲಂತೂ, ಬಿಜೆಪಿಯ ಒಬ್ಬ ಪ್ರಮುಖ ನಾಯಕ, ಜೆಡಿಎಸ್ ನ ನಾಯಕನ ಕೈ ಹಿಡಿದು, "ಕೋಲಾರವನ್ನು ಮೀಸಲು ಕ್ಷೇತ್ರದಿಂದ ತೆಗಿಸಿ, ನಿಮ್ಮನ್ನು ಎಂ ಪಿ ಮಾಡುತ್ತೇನೆ" ಎಂದು ಹೇಳಿದ್ದಾನೆ!

ನಾವೆಲ್ಲರೂ ಸ್ವಲ್ಪ ಪ್ರಜ್ಞಾವಂತಿಕೆಯಿಂದ ಯೋಚಿಸಿ ಮತದಾನ ಮಾಡೋಣ.

ಸಂವಿಧಾನದುಳಿವಿಗೆ, ಒಂದಾಗೋಣ💙

15/08/2023

ಉಪೇಂದ್ರನ ಬೆನ್ನಲ್ಲೇ ಮತ್ತೋರ್ವ ಮಂತ್ರಿಯ ವಿಡಿಯೋ ವೈರಲ್...

S S Mallikarjuna Minister of Mines & Geology and Horticulture ಅವರಿಂದ ಜಾತಿ ನಿಂದನೆಯ ವಿಡಿಯೋ ಪತ್ತೆ!!!

ಜಾತಿನಿಂದನೆ ಮಾಡಿದವ ಎಂತಾ ದೊಡ್ಡ ನಟನೇ ಆದರೂ, ಅವನ ವಿರುದ್ಧ ದ್ವನಿ ಎತ್ತಿ, ಸಮುದಾಯದ ವಿಷಯದಲ್ಲಿ ಅಪಮಾನವಾಗುವಂತೆ ಮಾತನಾಡಿದರೆ ಯಾರೇ ಆಗಲಿ, ತಕ್ಕ ಪಾಠ ಕಲಿಯತಕ್ಕದ್ದು ಎಂದು ಸ್ವಾಭಿಮಾನಕ್ಕೆ ಹೋರಾಡಿದ ಎಲ್ಲಾ ದಲಿತ ಸಂಘಟನೆಗಳಿಗೂ, ನಾಯಕರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು ಹಾಗೂ ಭೀಮಾ ನಮನಗಳು💙

ಆದರೆ,

"ಈ ಮಂತ್ರಿಯ ವಿರುದ್ಧ ಯಾಕೆ ಯಾರೂ ಪ್ರತಿಭಟಿಸುತ್ತಿಲ್ಲ!? ಕಾಂಗ್ರೆಸ್ ನವರು ಎಂದೋ!? ಅಥವಾ ಪ್ರಭಾವಿಗಳು ಎಂದೋ!? ಅಥವಾ ಆ ನಟನ ಮೇಲಿನ ಪೂರ್ವಯೋಜಿತ ದ್ವೇಷವೋ!?"

ಎಂದು ಸೋಷಿಯಲ್ ಮೀಡಿಯಾ ಮಾತನಾಡುತ್ತಿದೆ...

ಈ ವಿಷಯದಲ್ಲೂ ನಾವು ಮೌನವರಿಸುವುದು ಬೇಡ,
ದಲಿತರ ವಿಷಯಕ್ಕೆ ಯಾರೇ ಬಂದರೂ/ ಅವರು ಎಷ್ಟೇ ಪ್ರಭಾವಿಗಳಾದರೂ ನಾವು ಹೊರಡಬೇಕು...

ಎಲ್ಲಾ ದಲಿತ ಸಂಘಟನೆಗಳಿಗೂ ತಲುಪುವ ಹಾಗೆ ಶೇರ್ ಮಾಡಿ...

13/08/2023

"ಊರು ಎಂದಮೇಲೆ ಹೊಲಗೇರಿ ಇರುತ್ತೆ!!!
ಅಂತವರು ಇರ್ತಾರೆ ಏನು ಮಾಡಕ್ ಆಗಲ್ಲ!!!"

ವ್ಹಾ ಉಪೇಂದ್ರ!!!

ನಿಮ್ಮಲ್ಲೂ ಇಂತ ಹಲ್ಕಟ್ ಜಾತಿ ಮನಸ್ಥಿತಿ ಇದೆ ಅಂತ ಗೊತ್ತಿರಲಿಲ್ಲ....

ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ಮಾತಾಡೋದ್ ಆದರೆ,

ನಿನ್ನ ಸಮುದಾಯದವರೆಲ್ಲ ನಿನ್ನನ್ನು ಉಗ್ಗ್ ಕೊಂಡು ನಿನ್ನ ವಿರುದ್ಧ ಇದ್ದಾಗ,
ನಿನ್ನನ್ನು ಹುಚ್ಚು ಅಭಿಮಾನಿಗಳಾಗಿ ಹೆಚ್ಚು ಇಷ್ಟ ಪಟ್ಟವರು ಎಂದರೆ ನೀನು ಅಸಡ್ಡೆಯಿಂದ ಹೇಳಿರುವ ಅದೇ "ಹೊಲಗೇರಿ" ಜನಗಳು...

ನೆನಪಿರಲಿ,

ಈ ಮನಸ್ಥಿತಿ ತೋರಿಸಿದ ಮೇಲೆ,

ನಿನ್ನ ಕಲೆಗೆ ಮಾತ್ರ ಬೆಲೆಯೇ ವರೆತು,
ಎಳ್ಳಷ್ಟೂ ನಿನ್ನ ವ್ಯಕ್ತಿತ್ವಕ್ಕಲ್ಲ...

#ಧಿಕ್ಕಾರವಿರಲಿ_ಉಪೇಂದ್ರ...

03/11/2022

ಸಮುದಾಯದ ಕೂಗು, ಸ್ವಾಭಿಮಾನದ ಪ್ರಶ್ನೆ ...
ಜಾತಿವಾದಿಗಳ ಎದೆಯಲ್ಲಿ "ಜಲ್ಲ್" ಎನ್ನಿಸುವಷ್ಟು ಜೋರಾಗಿ ಇರಬೇಕು...

30/08/2022

ಜಾತಿವಾಧಿ ಜನಗಳೇ,
ಸೇರಿಸಿಕೊಳ್ಳುವಿರಾ ನಿಮ್ಮ ಜಾತಿಯೊಳಗೆ ನನ್ನಾ!!!?

22/08/2022

ಕುಡಿಯಲು ನೀರು ಮುಟ್ಟಿದರೂ ಕೊಲ್ಲುವರು,
ತಿನ್ನಲು ಬಾಡು ಮುಟ್ಟಿದರೂ ಕೊಲ್ಲುವರು,
ದುಡಿದ ಹೊನ್ನು ಮುಟ್ಟಿದರೂ ಕೊಲ್ಲುವರು,
ಪ್ರೀತಿಸಿದ ಹೆಣ್ಣು ಮುಟ್ಟಿದರೂ ಕೊಲ್ಲುವರು.

ಕಡೆಗೆ ನೀ ಸತ್ತರೆ, ಮಣ್ಣು ಮುಟ್ಟಲೂ ಬಿಡದೆ ಕೊಲ್ಲುವರಯ್ಯ...

ಏಕೆಂದರೆ ನೀನೊಬ್ಬ ದಲಿತ.
(ನೊಂದ ದಲಿತನ ನೋವಿನ ಕೂಗು)

14/04/2022

ಸುಮಾರು ತಿಂಗಳುಗಳ ನಂತರ page recovery ಆಗಿದೆ😍💙
ಅದೂ ಬಾಬಾಸಾಹೇಬರ ಜಯಂತೋತ್ಸವದ ದಿನವೇ😍💙

ಜೈ ಭೀಮ್💙💙

17/07/2021

ವಾಹ್...ಚೆನ್ನಾಗಿದೆ ಕಣ್ರಯ್ಯಾ!!!!

18/06/2021

ನನ್ನ ಈ Page ಗೆ ಮೂಲ ಸ್ಫೂರ್ತಿಯೇ ಸಿದ್ದಲಿಂಗಯ್ಯನವರ ಒಂದು Quote ಮತ್ತು ಗದ್ದರ್ ಅವರ ಒಂದು ಗೀತೆ..

ಈ ಪೇಜ್ ಅಲ್ಲಿ ಇರುವ ಒಂದೆರಡು Quote ಅವರಿಗೆ ಮುಟ್ಟಿಸಿವ ಆಸೆಯೂ ಇತ್ತು..

ಆದ್ರೆ ಇದರಲ್ಲಿ ಇನ್ನಷ್ಟು ಕಂಟೆಂಟ್ ಬರ್ದು ಆಮೇಲೆ ಅವರಿಗೆ ಮುಟ್ಟಿಸೋ ಪ್ರಯತ್ನ ಮಾಡೋಣ ಅಂತ ಸುಮ್ಮನಾಗಿದ್ದೆ...

ಕಾರಣಾಂತರಗಳಿಂದ Page Active ಇಡಲು ಆಗಲಿಲ್ಲ...
ಆದರೆ lockdown ನಲ್ಲಿ ಮತ್ತೆ Page Active ಇಡುವ ಯೋಚನೆಯಲ್ಲಿದ್ದೆ...

ನಂತರ Page block ಆಗಿ ಒಪೆನ್ ಏ ಆಗುತ್ತಿರಲಿಲ್ಲ, ಆದುದರಿಂದ ಇದರೆಡೆ ಗಮನ ಕೊಡೋದು ಬಿಟ್ಟಿದ್ದೆ..

ಆದ್ರೆ...😢

ಅಷ್ಟರಲ್ಲಿ ಸಿದ್ಧಲಿಂಗಯ್ಯನವರು ಇನ್ನಿಲ್ಲ!?😢

ನೀವು ಎಂದೆಂದಿಗೂ ಅಜರಾಮರ ಸರ್...

ಡಾ.ಸಿದ್ದಲಿಂಗಯ್ಯ(1954-∞)

11/05/2021

ಇದಕ್ಕೆ ನೋಡಿ ನಮಗೆ ಚಕ್ರವರ್ತಿ ಚಂದ್ರಚೂಡು ಅವರು ಇಷ್ಟ ಆಗೋದು💙 ಅವರ ಮಾತಿನ ಕೊನೆಯಲ್ಲಿ ಅವರ ಘೋಷಣೆ ಕೇಳಿ😍❤️

#ಜೈಭೀಮ್ 💙✊🏾

ಪ್ರತಿಷ್ಠಿತ ಷೋ ನಲ್ಲಿ ಭೀಮ ಘೋಷಣೆ ಮೊಳಗಿಸಿದ್ದಕ್ಕೆ ಅಭಿನಂದನೆಗಳು ಸರ್💙✊🏾

Bigg Boss Chakravarthy Chandrachood

14/04/2021

"ಜ್ಞಾನದ ರಣಕಹಳೆ" - ಬಾಬಾಸಾಹೇಬರ ಕುರಿತು ಕವನ...

ರಚಿಸಿದವರು - ರಘುಪತಿ, ವಕೀಲರು.

13/04/2021

130ನೇ ಭಿಮಾಜಯಂತಿಯ ಹಾರ್ದಿಕ ಶುಭಾಶಯಗಳು💙🇪🇺

Want your business to be the top-listed Government Service in Bangalore?

Click here to claim your Sponsored Listing.

Location

Website

Address

Bangalore