16/09/2024
ಶ್ರೀ ನಾರಾಯಣ ಗುರು ಕೋಆಪರೇಟಿವ್ ಸೊಸೈಟಿ, ಬೆಂಗಳೂರು ಇದರ 2023-2024 ನೇ ಸಾಲಿನ ಹಾಗೂ ನಾಲ್ಕನೇ ವರ್ಷದ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 15ನೇ 2024ರಂದು ಉಡುಪಿ ಸಂತೆಕಟ್ಟೆಯ ಮಧುವನ ಸಭಾಂಗಣದಲ್ಲಿ ಸಂಸ್ಥೆಯಾ ಸರ್ವ ಸದಸ್ಯರ ಹಾಗೂ ನಿರ್ದೇಶಕರ ಉಪಸ್ಥಿತಿಯಲ್ಲಿ ಜರಗಿತು.
07/09/2024
ಸಮಸ್ತ ಸದಸ್ಯಭಾಂದವರಿಗೆ ವಿಘ್ನನಿವಾರಕ ಗಣೇಶ ಚತುರ್ಥಿಯ ಶುಭಾಶಯಗಳು..ಸರ್ವೇ ಜನೋ ಸುಖಿನೋ ಭವತು...ಸರ್ವರಿಗೂ ಒಳಿತಾಗಲಿ...💐💐💐
25/08/2024
ಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಲಿ.,ಬೆಂಗಳೂರು ಇದರ ಆಡಳಿತ ಮಂಡಳಿಯ ನೂತನ ಉಪಾಧ್ಯಕ್ಷರನ್ನಾಗಿ ಶ್ರೀಯುತ ರಾಜು ಪೂಜಾರಿ ಉಪ್ಪೂರು,ಜಾತಬೆಟ್ಟು,ಉಡುಪಿ ಇವರನ್ನು ಇಂದು ನಡೆದ ಚುನಾವಣಾ ಪ್ರಕ್ರೀಯೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಗೋವಿಂದ ಬಾಬು ಪೂಜಾರಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳು ಉಪಸ್ಥಿತರಿದ್ದರು..ಇಂದಿನ ಚುನಾವಣಾ ಪ್ರಕ್ರೀಯೆಗೆ ರಿಟರ್ನಿಂಗ್ ಅಧಿಕಾರಿ ಶ್ರೀಮತಿ ಮೀನಾಕ್ಷಿ ಯವರು ಸಹಕರಿಸಿದರು.
20/08/2024
ಸರ್ವ ಸದಸ್ಯಭಾಂದವರಿಗೆ "ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು" ಎಂಬ ವಿಶ್ವಮಾನವ ಸಂದೇಶವನ್ನು ಸಾರಿದ ವಿಶ್ವಗುರು,ಮಹಾನ್ ಮಾನವತವಾದಿ ಸಂತ ಬ್ರಹ್ಮರ್ಷಿ ನಾರಾಯಣಗುರು ಜಯಂತಿಯ ಹಾರ್ದಿಕ ಶುಭಾಶಯಗಳು...ಎಲ್ಲರಿಗೂ ಒಳಿತಾಗಲಿ..ಜೈ ಗುರುದೇವ💐💐💐🙏🙏
29/06/2024
ನಮ್ಮ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಗೋವಿಂದ ಬಾಬು ಪೂಜಾರಿಯವರ ಉದ್ಯಮಗಳ ಸಾಲಿಗೆ ಇಂದು ಮತ್ತೊಂದು ಗರಿ ಸೇರ್ಪಡೆಯಾಗಲಿದೆ..ತಾವು ಬಹುದಿನಗಳಿಂದ ಕಂಡಿದ್ದ *ಹುಟ್ಟೂರ ಉದ್ಯಮ* ದ ಕನಸು ಇಂದು ಕೈಗೂಡುತ್ತಿದೆ..ಇಂದು ಉದ್ಘಾಟನೆ ಯಾಗಲಿರುವ ಚಿಕ್ಕಿ ಚಕ್ಕುಲಿ ಮತ್ತು ಇತರ ಖಾದ್ಯಗಳ ಉತ್ಪಾದನಾ ಘಟಕ ದ ಸಮಾರಂಭ ಯಶಸ್ವಿಯಾಗಿ ನೆರವೇರಲಿ...ಈ ಉದ್ಯಮದ ಮೂಲಕ ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವಂತಾಗಲಿ...ನಿಮ್ಮ ಈ ಶುಭಕಾರ್ಯಕ್ಕೆ ತಾಯಿ ಮೂಕಾಂಬಿಕೆ ಹಾಗೂ ಬ್ರಹ್ಮರ್ಷಿ ಗುರುವರ್ಯರು ಹರಸಿ ಆಶಿರ್ವದಿಸಲಿ ಎಂಬ ಹಾರೈಕೆ ನಮ್ಮೆಲ್ಲರದು.. ಶುಭವಾಗಲಿ ಸರ್...💐💐💐💐
ಶುಭ ಕೋರುವವರು..
ನಿರ್ದೇಶಕರುಗಳು ಹಾಗೂ ಸಿಬ್ಬಂದಿ ವರ್ಗ..
*ಶ್ರೀ ನಾರಾಯಣ ಗುರು ಕೋ ಆಪರೇಟಿವ್ ಸೊಸೈಟಿ ಲಿ.ಬೆಂಗಳೂರು.*💐💐💐
26/06/2024
ನಮ್ಮ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರು,ಯಶಸ್ವಿ ಉದ್ಯಮಿಗಳು ಹಾಗೂ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ್ನು ಹುಟ್ಟು ಹಾಕಿ ಬಡವರ ಹಾಗೂ ಅಶಕ್ತರ ಪಾಲಿಗೆ ಸಹಾಯ ಹಸ್ತವನ್ನು ಚಾಚುತ್ತ ಸಮಾಜ ಸೇವೆಗೈಯುತ್ತಿರುವ ಕೊಡುಗೈದಾನಿಯಾಗಿರುವ ಶ್ರೀಯುತ ಗೋವಿಂದ ಬಾಬು ಪೂಜಾರಿಯವರಿಗೆ ಜನುಮ ದಿನದ ಹೃದಯ ಪೂರ್ವಕ ಶುಭಾಶಯಗಳು.. ನಿಮಗೆ ತಾಯಿ ಕೊಲ್ಲುರು ಮೂಕಾಂಬಿಕೆಯ ಆಶಿರ್ವಾದ ಹಾಗೂ ಬ್ರಹ್ಮರ್ಷಿ ನಾರಾಯಗುರುವರ್ಯರ ಕೃಪೆ ನಿಮ್ಮೊಂದಿಗೆ ಸದಾ ಇರಲಿ ಎಂಬ ಶುಭ ಹಾರೈಕೆ ನಮ್ಮೆಲ್ಲರದು...ಶುಭವಾಗಲಿ ಸರ್..💐💐💐🎂🎂🎂
08/05/2024
*ವಿವಾಹ ವಾರ್ಷಿಕೋತ್ಸವದ ಶುಭಕಾಮನೆಗಳು*
ಖ್ಯಾತ ಉದ್ಯಮಿಗಳು,ಸಮಾಜ ಸೇವಕರು ಹಾಗೂ ನಮ್ಮ ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಶ್ರೀಯುತ ಗೋವಿಂದಬಾಬು ಪೂಜಾರಿ ಹಾಗೂ ಮಾಲತಿ ಗೋವಿಂದ ಬಾಬು ಪೂಜಾರಿಯವರು ತಮ್ಮ ವಿವಾಹ ಸಂಭ್ರಮದ 15 ನೇ ವಾರ್ಷಿಕೋತ್ಸವ ವನ್ನು ಇಂದು ಆಚರಿಸಿಕೊಳ್ಳುತ್ತಿದ್ದಾರೆ..ನಿಮ್ಮ ಈ ಸಾರ್ಥಕ ಹಾಗೂ ಮಾದರಿ ವೈವಾಹಿಕಜೀವನ ಸಮಾಜಕ್ಕೆ ಇನ್ನಷ್ಟು ಮಾದರಿಯಾಗಿರಲಿ..ಸುಖವಾಗಿ ನೂರುಕಾಲ ಬಾಳಿ..ನಿಮಗೆ ನಮ್ಮ ಆರಾಧ್ಯಗುರುಗಳಾದ ಬ್ರಹ್ಮರ್ಷಿ ನಾರಾಯಣಗುರುಗಳು ಹರಸಿ ಆಶಿರ್ವದಿಸಲಿ ಎಂಬ ಹಾರೈಕೆ ನಮ್ಮೆಲ್ಲರದು...ಶುಭವಾಗಲಿ..💐💐🎂🎂🎂🙏
*ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿವರ್ಗ*
*SNGCSL*
09/04/2024
ಸಮಸ್ತ ಸದಸ್ಯಭಾಂದವರಿಗೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು..💐💐
12/11/2023
ಸಮಸ್ತ ಸದಸ್ಯಭಾಂಧವರಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು...