Transport Department Karnataka

Transport Department Karnataka

Share

26/05/2026

ರಸ್ತೆಗಳ ಮೇಲೆ ಫಸಲು ಸುರಿಯುವುದು ಕಾನೂನುಬಾಹಿರ ಮತ್ತು ಅಪಾಯಕಾರಿ, ಇದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ.

19/05/2026

Live:- ರಾಜ್ಯ ಸರ್ಕಾರದ 3 ವರ್ಷಗಳ "ಸಾಧನೆಯ ಸಾರ್ಥಕ ಸೇವೆಗಳ ಸಮರ್ಪಣಾ' ಕಾರ್ಯಕ್ರಮ

Photos from Transport Department Karnataka's post 18/05/2026

ತುಮಕೂರು ಪ್ರಾದೇಶಿಕ ಸಾರಿಗೆ ಕಛೇರಿಯ ಸೀಜಿಂಗ್ ಯಾರ್ಡ್ ಮತ್ತು ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸುವ ಕಾಮಗಾರಿಯ ಶಿಲಾನ್ಯಾಸ ಮತ್ತು ನವೀಕೃತ ಕಟ್ಟಡದ ಉದ್ಘಾಟನೆಯೂ ದಿನಾಂಕ: 19-05-2026ರಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್, ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಮಾನ್ಯ ಸಾರಿಗೆ ಮತ್ತು ಮುಜುರಾಯಿ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರ ಘನ ಉಪಸ್ಥಿತಿಯೊಂದಿಗೆ ನೆರವೇರಲಿದೆ.

Chief Minister of Karnataka DIPR Karnataka Ramalinga Reddy

Photos from Transport Department Karnataka's post 18/05/2026

ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ಜನಪರ ಸೇವೆ, ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮತ್ತು ರಸ್ತೆ ಸುರಕ್ಷತಾ ಕ್ರಮಗಳ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಿದೆ.

Ramalinga Reddy DIPR Karnataka PIB Bengaluru

16/05/2026

ಅತಿಯಾದ ಭಾರದ ವಾಹನ — ಅಪಘಾತಕ್ಕೆ ಆಹ್ವಾನ! 🚗⚠️

ವಾಹನದ ಮೇಲ್ಭಾಗದಲ್ಲಿ ಮಿತಿಮೀರಿ ವಸ್ತುಗಳನ್ನು ಸಾಗಿಸುವುದು ಅಪಾಯಕಾರಿಯಾಗಿದೆ. ಇದು ವಾಹನದ ಸಮತೋಲನ ಕಳೆದು ಅಪಘಾತಕ್ಕೆ ಕಾರಣವಾಗಬಹುದು.

ಸುರಕ್ಷಿತ ಪ್ರಯಾಣಕ್ಕಾಗಿ ನಿಯಮ ಪಾಲಿಸಿ, ಜೀವ ಉಳಿಸಿ.

15/05/2026

VAHAN 4.0 ವ್ಯವಸ್ಥೆಯ ಬ್ಯಾಕ್‌ಎಂಡ್ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ, ತಾಂತ್ರಿಕ ದೋಷನಿವಾರಣಾ ಕಾರ್ಯಕ್ಕಾಗಿ ಆನ್‌ಲೈನ್ ವಾಹನ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.

ದಿನಾಂಕ: 15.05.2026 ರಿಂದ 18.05.2026 ರವರೆಗೆ
ಈ ಅವಧಿಯಲ್ಲಿ ವಾಹನ ಸಂಬಂಧಿತ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ.

ಸಾರ್ವಜನಿಕರು ಸಹಕರಿಸುವಂತೆ ವಿನಂತಿ.

12/05/2026

ಮೈಸೂರಿನಲ್ಲಿ ನಿಯಮ ಉಲ್ಲಂಘಿಸಿ, ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ಶಾಲಾ ಬಸ್‌ ಅನ್ನು ಜಪ್ತಿ ಮಾಡಲಾಗಿದೆ. ಈ ವಾಹನಕ್ಕೆ ಕಳೆದ 8 ತಿಂಗಳಿನಿಂದ ಫಿಟ್ನೆಸ್ ಪ್ರಮಾಣಪತ್ರ (FC) ಇರಲಿಲ್ಲ, ವಿಮೆ (Insurance) ಹಾಗೂ ತೆರಿಗೆಯನ್ನೂ ಕಟ್ಟದ. ಅಷ್ಟೇ ಅಲ್ಲದೆ, ತುರ್ತು ನಿರ್ಗಮನ ದ್ವಾರವನ್ನು (Emergency Exit) ಬಂದ್ ಮಾಡಿ, ಅವೈಜ್ಞಾನಿಕವಾಗಿ ಸೀಟ್ ಅಳವಡಿಸಲಾಗಿರುವ ಹಾಗೂ ಒಡೆದ ಗಾಜುಗಳನ್ನು ಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು.

02/05/2026

ಚಂದಾಪುರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ಹಾಗೂ ಜಪ್ತಿ ವಾಹನಗಳ ನಿಲುಗಡೆ ಸ್ಥಳದ ಉದ್ಘಾಟನೆಯನ್ನು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಸಂಸದರಾದ ಡಾ. ಸಿ.ಎನ್. ಮಂಜುನಾಥ್, ಮಾನ್ಯ ಶಾಸಕರಾದ ಶ್ರೀ ಬಿ. ಶಿವಣ್ಣ, ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪುಟ್ಟಣ್ಣ, ಶ್ರೀ ಹೆಚ್.ಎಸ್. ಗೋಪಿನಾಥ್ ರೆಡ್ಡಿ, ಶ್ರೀ ರಾಮೋಜಿ ಗೌಡ ಹಾಗೂ ಸಾರಿಗೆ ಇಲಾಖೆಯ ಆಯುಕ್ತರಾದ ಶ್ರೀ ಯೋಗೀಶ್ ಅವರು ಉಪಸ್ಥಿತರಿದ್ದರು.

Ramalinga Reddy DIPR Karnataka

01/05/2026

ಸೂಚನೆ ಇಲ್ಲದೆ ತಿರುಗುವುದು ಅಪಾಯಕ್ಕೆ ಆಹ್ವಾನ.
ಸುರಕ್ಷತೆ ನಿಮ್ಮ ಕೈಯಲ್ಲಿ ಇದೆ.

Want your business to be the top-listed Government Service in Bangalore?

Click here to claim your Sponsored Listing.

Location

Telephone

Website

https://twitter.com/tdkarnataka, http://www.youtube.com/@transportdepartment-karnat

Address


Transport Commissioner Office , 1st Floor , TTMC Building , A Block, K H Road, Shanthinagar
Bangalore
560027