Yaduveerbjp

Yaduveerbjp

Share

Member of Parliament, Mysore-Kodagu
Lok Sabha Constituency

12/06/2026

ಸಂಸ್ಕೃತಿ ಹಾಗೂ ಕಲೆಗಳ ಐತಿಹಾಸಿಕ ತವರೂರಾದ ಕರ್ನಾಟಕವು, ಅನಾದಿ ಕಾಲದಿಂದಲೂ ಅಪೂರ್ವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಗೌರವಿಸುತ್ತಾ ಬಂದಿದೆ. ಕಲಾ ಲೋಕದ ಧ್ರುವತಾರೆಗಳಂತಿರುವ ಹಿರಿಯ ಚೇತನಗಳಿಂದ ಹಿಡಿದು ಇಂದಿನ ಉದಯೋನ್ಮುಖ ಪ್ರತಿಭೆಗಳವರೆಗೆ, 'ಕೇಂದ್ರ ಸಂಗೀತ ನಾಟಕ ಅಕಾಡೆಮಿ'ಯ ಅತ್ಯುನ್ನತ ಪುರಸ್ಕಾರಗಳಿಗೆ ಭಾಜನರಾಗಿರುವ ನಮ್ಮ ನಾಡಿನ ಎಲ್ಲಾ ಕಲಾ ಸಾಧಕರಿಗೂ ಹೃತ್ಪೂರ್ವಕ ಅಭಿನಂದನೆಗಳು.

12/06/2026

Heartfelt congratulations to Prof. M. Nagaraj on being unanimously elected as a Member of Parliament to the Rajya Sabha from Karnataka.

Wishing him success in serving the people and contributing to the nation’s progress.

12/06/2026

ಕರ್ನಾಟಕದಲ್ಲಿ ಮುಂಗಾರು ಆರಂಭವಾಗಿದ್ದು, ಹೊಸ ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿದ್ದು, ಮೈಸೂರು ಜಿಲ್ಲೆಯ 168 ಸರ್ಕಾರಿ ಶಾಲೆಗಳಲ್ಲಿ 406 ಶಿಥಿಲಗೊಂಡ ತರಗತಿ ಕೊಠಡಿಗಳು ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯಕಾರಿಯಾಗಿವೆ. ಆದರೂ, ನಿರ್ಣಾಯಕ ದುರಸ್ತಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಲಾಭದಾಯಕ ಖಾತೆಗಳಿಗಾಗಿ ರಾಜಕೀಯ ಒಳಜಗಳವು ಕರ್ನಾಟಕ ಸಚಿವ ಸಂಪುಟವನ್ನು ನಿಷ್ಕ್ರಿಯಗೊಳಿಸಿದೆ. ಪ್ರಾಥಮಿಕ ಶಿಕ್ಷಣ ಸಚಿವಾಲಯವು ನಿರ್ಲಕ್ಷ್ಯಕ್ಕೊಳಗಾಗಿ ಸಚಿವರಿಲ್ಲದೆ ಕುಳಿತಿದೆ. ಸರ್ಕಾರ ಅಧಿಕಾರಕ್ಕಾಗಿ ಜಗಳವಾಡುವುದನ್ನು ನಿಲ್ಲಿಸಿ ಈ ಶಾಲೆಗಳನ್ನು ಯಾವಾಗ ಸರಿಪಡಿಸುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

Photos from Yaduveerbjp's post 11/06/2026

ಇಂದು ಕೊಡಗಿನ ಸೈನಿಕ್ ಶಾಲೆಯಲ್ಲಿ ನಡೆದ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿ 2026 (ಪೂರ್ವ ಸುಬೊತೊ ಕಪ್ 2026) ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇರಳಂ ಮತ್ತು ತಮಿಳುನಾಡು ರಾಜ್ಯಗಳ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ಉಪಸ್ಥಿತರಿದ್ದರು.

Today, I participated as the guest at the closing ceremony of the All India Sainik Schools Inter-Group Football Tournament 2026 (Purva Subboto Cup 2026) held at Kodagu Sainik School and inaugurated the event.

The event was attended by the Governors of Kerala and Tamil Nadu, Shri Rajendra Vishwanath Arlekar, who were present as the chief guests.

11/06/2026

ಕೆ.ಬಾಡಗ ವ್ಯಾಪ್ತಿಯಲ್ಲಿನ ಪಿಎಂ ಜನ್ ಮನ್ ಹಾಗೂ ಜಲಜೀವನ್ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಾಯಿತು.

ಇದೆ ವೇಳೆ ಕೊಡಂಗೆ ಹಾಡಿ ರಸ್ತೆ ,ಹೊಸಕೊಲ್ಲಿ- ಬಾಡಗ ರಸ್ತೆ ಅಭಿವೃದ್ದಿ ಪರಿಶೀಲನೆ ನಡೆಸಲಾಯಿತು. ನಂತರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಅಡಿಯಲ್ಲಿ ಹೊಸಕೊಲ್ಲಿ, ಹಾಲಂದೋಡ್, ನಾಣಚ್ಚಿ, ನಾಣಚ್ಚಿ-ಕೊಡಮೂಲೆ ಗ್ರಾಮಗಳಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ವೀಕ್ಷಿಸಿ‌ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದೆ.

I recently conducted an inspection of the PM JANMAN and Jal Jeevan Mission works in the K. Badaga area. During my visit, I also reviewed the development of key roads, including the Kodange Haadi Road and the Hosakolli-Badaga Road.

Under the Union Government’s ambitious Jal Jeevan Mission, I visited ongoing projects in Hosakolli, Halandoor, Nanachi, and Nanachi–Kodamule villages.

I closely monitored the progress and provided the necessary guidance to officials to ensure these works are completed efficiently and effectively for the benefit of the local communities.

11/06/2026

During the election, the Congress announced guarantees without any conditions. But today, by gradually imposing rules on the ‘Gruha Lakshmi’ scheme and through poor implementation, the Congress Government is deceiving the people.

Removing deceased beneficiaries from the list is acceptable. However, suddenly dropping thousands of women by declaring them “ineligible” has created serious confusion. If they were indeed ineligible, how did the government continue giving them money for the last three years?

What is most shocking is that this exclusion process is taking place at a time when the Department of Women and Child Welfare does not even have a minister.

10/06/2026

ಕೊಡಗು ಜಿಲ್ಲೆಯ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRF) ಅಡಿಯಲ್ಲಿ ಜಿಲ್ಲೆಯ ಮೂರು ಪ್ರಮುಖ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹22 ಕೋಟಿ ಮಂಜೂರು ಮಾಡಲಾಗಿದೆ.

ಕೊಡಗಿನ ಬಹುಕಾಲದ ರಸ್ತೆ ಅಭಿವೃದ್ಧಿ ಅಗತ್ಯಗಳಿಗೆ ಸ್ಪಂದಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಹಾಗೂ ಭಾರತ ಸರ್ಕಾರಕ್ಕೆ ಕೊಡಗಿನ ಜನತೆಯ ಪರವಾಗಿ ಕೃತಜ್ಞತೆಗಳನ್ನು ತಿಳಿಸುತ್ತೇನೆ.

In a significant boost to road and infrastructure development in Kodagu district, the central government has sanctioned a total of ₹22 crore under the Central Road and Infrastructure Fund (CRF) for the development of three major state highways in the district.

On behalf of the people of Kodagu, I extend my gratitude to Shri Nitin Gadkari, Union Minister for Road Transport and Highways, and the Government of India for responding to the long-standing road development needs of Kodagu.

Photos from Yaduveerbjp's post 10/06/2026

ಇಂದು ಬಾಡಗ ಗ್ರಾಮದಲ್ಲಿ ಕೆ. ಬಡಗ ಸಹಕಾರ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸಂಘದ ಉದ್ಘಾಟನೆಯನ್ನು ನೆರವೇರಿಸಿ ಶುಭಾಶಯಗಳನ್ನು ತಿಳಿಸಲಾಯಿತು.

Today, I participated as the chief guest at the inauguration of the K. Badaga Cooperative Society in Bādaga village and conveyed my greetings and best wishes.

Photos from Yaduveerbjp's post 10/06/2026

ಶ್ರೀ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ 12 ವರ್ಷಗಳ ನಿರಂತರ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಶ್ರೀ ಚಂದ್ರಮೌಳೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ಅವರ ಸುದೀರ್ಘ ಆಡಳಿತದಲ್ಲಿ ಭಾರತವು ಮತ್ತಷ್ಟು ಪ್ರಗತಿ ಕಾಣಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಎಲ್ ನಾಗೇಂದ್ರ ಅವರು ಚಾಮರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ದಿನೇಶ್ ಗೌಡ ರವರ ನೇತೃತ್ವದಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

On the occasion of Hon’ble Prime Minister Narendra Modi Ji completing 12 years of continuous service as India’s Prime Minister, I visited Sri Chandramouleshwari Temple in Mysuru today, offered special prayers, and prayed for India's continued progress and success under his leadership.

On this occasion, Mysuru city BJP president L. Nagendra, under the leadership of Chamaraja Assembly constituency president Dinesh Gowda, distributed prasadam to the devotees.

Photos from Yaduveerbjp's post 10/06/2026

ಇಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ದೇಶದ ಪ್ರಧಾನಿಯಾಗಿ ಅತಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಶ್ರೀ ನರೇಂದ್ರ ಮೋದಿ ಅವರ 12 ವರ್ಷಗಳ ಸಾಧನೆ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದೆ.

12 ವರ್ಷಗಳ ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ ಅಕ್ಷರದೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿ ಭಾರತವು ನಿರಂತರ ಪ್ರಗತಿಯನ್ನು ಕಾಣುತ್ತಿದೆ.

ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ಬಡವರ, ಮಹಿಳೆಯರ, ರೈತರ ಕಲ್ಯಾಣ ಮತ್ತು ಯುವ ಸಬಲೀಕರಣಕ್ಕಾಗಿ ಶ್ರಮಿಸುತ್ತಾ ರಾಷ್ಟ್ರ ನಿರ್ಮಾಣದಲ್ಲಿ ಮುನ್ನಡೆಯುತ್ತಿದೆ.

Spoke at a press conference held at the BJP office in Mysuru today on Prime Minister Shri Narendra Modi’s 12-year achievement of serving the longest term as India’s Prime Minister.

Under Prime Minister Shri Narendra Modi’s leadership, India continues its steady progress with 12 years of trust, development, and people’s welfare.

Guided by the vision of Nation First, the country is advancing in nation-building through efforts for the welfare of the poor, women, farmers, and youth empowerment.

Want your business to be the top-listed Government Service in Mysore?

Click here to claim your Sponsored Listing.

Location

Address

Mysore