30/04/2026
ನಿನ್ನೆ ಸಂಜೆಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಅದಗೆಟ್ಟಿದ್ದ ರಸ್ತೆಗಳ ದುರಸ್ತಿ ಕಾರ್ಯ.
ಡಾ ರಾಜಕುಮಾರ್ ವಾರ್ಡ್,14 C ಕ್ರಾಸ್, ಕೆಂಪಯ್ಯ ಎಕ್ಸ್ಟೆಂಶನ್ ಅಗ್ರಹಾರ ದಾಸರಹಳ್ಳಿ
ಶಾಸಕರ ಕಚೇರಿಗೆ ಬಂದ ದೂರಿನ ಅನ್ವಯ ವಾರ್ಡ್ ಅಧ್ಯಕ್ಷರಾದ ಪುರುಷೋತ್ತಮ್ ಮತ್ತು ನಾಯಕರ ಜೊತೆಗೂಡಿ ಸ್ವಚ್ಛತಾ ಕಾರ್ಯ.
ಸ್ವಸ್ತಿಕ್ ಯತೀಶ್
ಡಾ ರಾಜಕುಮಾರ್ ವಾರ್ಡ್
28/04/2026
ನಮ್ಮ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಕೃಷ್ಣರವರ ಹುಟ್ಟುಹಬ್ಬದಂದು ಅವರಿಗೆ ನಾವು, ರಾ ನರಸಿಂಹ ಮೂರ್ತಿರವರು ಹಾಗೂ ಪುಟ್ಟರಾಜರವರು ಶಾಸಕರಿಗೆ ಶುಭ ಹಾರೈಸಿದ ಸಂದರ್ಭದ.
25/04/2026
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಡವರ ಬಂಧು ಶ್ರೀ ಪ್ರಿಯಕೃಷ್ಣರವರು ಗೋವಿಂದರಾಜನಗರ ಕ್ಷೇತ್ರದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 100 ಹಾಸಿಗೆಗಳ ಘಟಕವನ್ನು ಸ್ಥಾಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜೊತೆ ಇಂದು ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಹಿರಿಯರ ಹೃದಯ ಆರೈಕೆಗಾಗಿ ಗೋವಿಂದರಾಜನಗರದಲ್ಲಿ ಆರೋಗ್ಯ ಸೇವೆಯನ್ನು ನೀಡಲು ಆಡಳಿತ ವಿಕೇಂದ್ರೀಕರಣ ಮಾಡುವ ಮುಖಾಂತರ ಎಲ್ಲರಿಗೂ ಹೃದಯ ಆರೋಗ್ಯ ಸೇವೆ ದೊರಕಲಿ ಎಂಬ ಮಹತ್ವದ ಹೆಜ್ಜೆ ಇರಿಸಲಾಗಿದೆ.
ಬೆಂಗಳೂರು ನಗರದ ರಾಜಾಜಿನಗರ, ಯಶವಂತಪುರ, ರಾಜರಾಜೇಶ್ವರಿನಗರ ಸೇರಿದಂತೆ ದಾಸರಹಳ್ಳಿ, ಪೀಣ್ಯ ಹಾಗೂ ಬೆಂಗಳೂರು ಗ್ರಾಮಾಂತರ ನಿವಾಸಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ರಾಮನಗರ, ಮಂಡ್ಯ, ತುಮಕೂರು ಮತ್ತು ಹಾಸನ ಜಿಲ್ಲೆಗಳಿಂದ ಬರುವ ರೋಗಿಗಳಿಗೂ ಸಹಾಯವಾಗಲಿದೆ.
ಸಚಿವರಾದ ಶರಣಪ್ರಕಾಶ ಪಾಟೀಲ್, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಬಿ. ದಿನೇಶ್ ಮತ್ತು ಜಿಬಿಎ ಮುಖ್ಯ ಆಯುಕ್ತ ಎನ್. ಮಹೇಶ್ವರ ರಾವ್, ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್, ಪಶ್ಚಿಮ ಮಹಾನಗರ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
16/04/2026
ನಮ್ಮ ನೆಚ್ಚಿನ ನಾಯಕರು , ಕರ್ನಾಟಕ ಸರ್ಕಾರದ ಮಾಜಿ ವಸತಿ ಸಚಿವರು, ವಿಜಯನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎಂ. ಕೃಷ್ಣಪ್ಪ ಅಪ್ಪಾಜಿ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
09/04/2026
Govindaraj Nagar Incident | Pradeep Krishnappa | ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ ನಲ್ಲಿ ದಿನಾಂಕ 06-04-2026 ರಂದು ಮಹಡಿ ಮೇಲಿಂದ 1.5 ವರ್ಷದ ಮಗು ಬಿದ್ದು, ರಂಗಾದೊರೈ ಆಸ್ಪತ್ರೆಯ ಐ ಸಿ ಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶಾಸಕರಾದ ಶ್ರೀ ಪ್ರಿಯಕೃಷ್ಣ ರವರ ಪರವಾಗಿ ವಿಜಯನಗರ ವಿಧಾನಸಭಾ ಕ್ಷೇತ್ರದ ಯುವ ನಾಯಕರು ಶ್ರೀ ಪ್ರದೀಪ್ ಕೃಷ್ಣಪ್ಪ ರವರು ಆಸ್ಪತ್ರೆಗೆ ಭೇಟಿ ನೀಡಿ ಮಗು ಶೀಘ್ರ ಗುಣಮುಖವಾಗಲಿ ಎಂದು ಪೋಷಕರಿಗೆ ಧೈರ್ಯ ತುಂಬಿ 2 ಲಕ್ಷ ರೂಪಾಯಿಗಳ ಸಹಾಯಾರ್ಥವಾಗಿ ಚಿಕಿತ್ಸೆ ವೆಚ್ಚಕ್ಕೆ ನೀಡಿದರು.| Speed News Kannada
28/03/2026
27/3/2026 ರ ಸಂಜೆ 4:30 ಗಂಟೆಗೆ ಡಾ. ರಾಜಕುಮಾರ್ ವಾರ್ಡಿನ ಬಿ ಎಲ್ ಓ ಮತ್ತು ಬಿ ಎಲ್ ಎ ಗಳ ಸಭೆಯನ್ನು ಬಿಬಿಎಂಪಿ ಕಂದಾಯ ನಿರೀಕ್ಷಕ (Revenue Inspector - RI) ಅಧಿಕಾರಿಯಾದ ರವಿರಾಜ್ ರವರು ಬಿಬಿಎಂಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಬಿ ಎಲ್ ಓ ಗಳ ಜೊತೆ ಮಾತನಾಡಿದ ಸಂದರ್ಭ🙏💞
31/01/2026
ಅಗ್ರಹಾರ ದಾಸರಹಳ್ಳಿಯ ಶ್ರೀ ಭಕ್ತ ಆಂಜನೇಯ ಸ್ವಾಮಿ ಮತ್ತು ಗ್ರಾಮ ದೇವತೆ ಶ್ರೀ ಪಟಾಲಮ್ಮ ದೇವಿಯ ಮತ್ತು ನಮ್ಮ ನೆಚ್ಚಿನ ನಾಯಕರಾದ ವಿಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಜನಪ್ರಿಯ ಶಾಸಕರಾದ ಶ್ರೀ ಎಂ ಕೃಷ್ಣಪ್ಪನವರು ಹಾಗೂ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಕೃಷ್ಣರವರ ಆಶೀರ್ವಾದದೊಂದಿಗೆ, ವಾರ್ಡಿನ ಸಮಸ್ತ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಹಾಗೂ ವಾರ್ಡಿನ ನಾಗರಿಕರ ಆಶೀರ್ವಾದ ಮತ್ತು ಬೆಂಬಲದಿಂದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ, ಪಶ್ಚಿಮ ನಗರ ಪಾಲಿಕೆಯ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಡಾಕ್ಟರ್ ರಾಜಕುಮಾರ್ ವಾರ್ಡ್, ವಾರ್ಡ್ ಸಂಖ್ಯೆ 70ರ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಲಾಯಿತು.
16/01/2026
ಇಂದು ಬೆಳಗ್ಗೆ ನಮ್ಮ ನೆಚ್ಚಿನ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಕೃಷ್ಣರವರನ್ನು ಭೇಟಿ ಮಾಡಿದ ಸಂದರ್ಭ💕
01/01/2026
ನಮ್ಮ ನೆಚ್ಚಿನ ನಾಯಕರಾದ ವಿಜಯನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ಎಂ ಕೃಷ್ಣಪ್ಪನವರಿಗೂ ಹಾಗೂ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಕೃಷ್ಣರವರಿಗೂ 2026ರ ಹೊಸ ವರ್ಷದ ಶುಭಾಶಯಗಳನ್ನು ಕೋರಿದ ಸಂದರ್ಭ.
#ವಿಜಯನಗರ