27/05/2026
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರದ 'F3 ಮಹಾ ಕವಚ' ಜಾಗತಿಕ ಬಿಕ್ಕಟ್ಟಿನಲ್ಲೂ ಭಾರತದ ಆರ್ಥಿಕತೆಗೆ ಗಟ್ಟಿ ರಕ್ಷಣೆ ನೀಡಿದೆ.
⛽: ರಷ್ಯಾದಿಂದ ದಾಖಲೆ ಇಂಧನ ಆಮದು, ಸುಂಕ ಕಡಿತದಿಂದ ಜನರಿಗೆ ನೆರವು.
🌾 ರಸಗೊಬ್ಬರ ಸಬ್ಸಿಡಿ ಹೊರೆ ಹೊತ್ತ ಸರ್ಕಾರ, 200 ಲಕ್ಷ ಟನ್ ದಾಸ್ತಾನು.
💵 : ಡಾಲರ್ ರಕ್ಷಣೆ, ರೂಪಾಯಿ-ರೂಬಲ್ ವ್ಯಾಪಾರದ ಮೂಲಕ ಆರ್ಥಿಕ ಸ್ಥಿರತೆ.
19/04/2026
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ನಾರಿಶಕ್ತಿ ಅಧಿನಿಯಮ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್ ಮತ್ತು ವಿಪಕ್ಷಗಳ ವಿರುದ್ಧ ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಎಸ್ ವಿ ರಾಮಚಂದ್ರ ಗೌಡ ಹಾಗೂ ಓಬಿಸಿ ಮೋರ್ಚಾ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಅಶ್ವಿನಿ ಶಂಕರ್ Ashwini Swamy ರವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
19/04/2026
ಮಹಿಳಾ ಮೀಸಲಾತಿ ಜಾರಿ ರಾಜಕೀಯ ಲಾಭಕ್ಕಾಗಿ ಅನ್ನೋದು ತಪ್ಪು. ಒಳ್ಳೆಯ ನೀತಿ ಯಾವಾಗ ಬಂದರೂ ಒಳ್ಳೆಯದಾಗಿದೆ. ಬಸವಣ್ಣನವರು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಅವಕಾಶದ ಬಗ್ಗೆ ಹೇಳಿದ್ದಾರೆ. ಅವರ ಕಾಲದಲ್ಲಿ ಹೆಣ್ಣು-ಗಂಡು ಭೇದವಿಲ್ಲದೆ ಸಮಾನ ಹಕ್ಕಿಗಾಗಿ ಹೋರಾಡಿದ್ದರು. ಮಹಿಳಾ ಮೀಸಲಾತಿ ವಿರೋಧಿಸುವುದು ಸಮಾನತೆ ತತ್ವಕ್ಕೆ ವಿರೋಧವಾಗಿದೆ. ವಿರೋಧ ಪಕ್ಷದ ಈ ನೀತಿಯನ್ನು ಖಂಡಿಸುತ್ತೇನೆ.
- ಶ್ರೀ ಬಿ. ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು
04/04/2026
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ, ಇಂದು, ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ಆಯೋಜಿಸಿದ ಚುನಾವಣಾ ಪಾದಯಾತ್ರೆಯು ಹೊಸ ಮುನ್ನುಡಿಯನ್ನು ಬರೆದಿದೆ. "ಹಿಂದುಳಿದ ವರ್ಗದವರ ನಡೆ – ಬಿಜೆಪಿಯ ಕಡೆ" (OBC With BJP) ಎಂಬ ಘೋಷದೊಂದಿಗೆ ನಡೆದ ಈ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಜನರು ಮತ್ತು ಅಭಿಮಾನಿಗಳು ಪಕ್ಷದ ಮೇಲಿನ ನಂಬಿಕೆ ಮತ್ತು ಬೆಂಬಲವನ್ನು ಸ್ಪಷ್ಟವಾಗಿ ತೋರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ರವರ ಮಾರ್ಗದರ್ಶನದಲ್ಲಿ ಹಾಗೂ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್ ರಘು ಕೌಟಿಲ್ಯ ರವರ ಮುಂದಾಳುತ್ವದಲ್ಲಿ, ಕಾರ್ಯಕರ್ತರು ಮತ್ತು ಮುಖಂಡರ ಸಕ್ರಿಯ ಭಾಗವಹಿಸುವಿಕೆಯಿಂದ ಪಾದಯಾತ್ರೆಯು ಯಶಸ್ವಿಯಾಯಿತು. ಈ ಪಾದಯಾತ್ರೆಯು ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಹಿಂದುಳಿದ ವರ್ಗದವರ ಸಬಲೀಕರಣದ ಸಂಕೇತವಾಗಿದೆ. ಸಮಾಜದ ಪ್ರತಿಯೊಂದು ವರ್ಗದವರನ್ನು ಒಂದೇ ವೇದಿಕೆಯಲ್ಲಿ ತರಲು ಬಿಜೆಪಿ ಕೈಗೊಂಡ ಈ ಪ್ರಯತ್ನವು ಹೊಸ ಇತಿಹಾಸವನ್ನು ನಿರ್ಮಿಸಿದೆ... ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಜೊತೆ ಕೈಜೋಡಿಸೋಣ, ಹಿಂದುಳಿದ ವರ್ಗದ ಧ್ವನಿ ಬಿಜೆಪಿಯ ಧ್ಯೇಯ, ಬಿಜೆಪಿ ಜೊತೆ ಕೈಜೋಡಿಸಿ ಅಭಿವೃದ್ಧಿಯ ದಾರಿಯಲ್ಲಿ ಸಾಗೋಣ.
Vijayendra Yediyurappa
03/04/2026
ದಾವಣಗೆರೆಯಲ್ಲಿ ಅತೀ ಹಿಂದುಳಿದ ಸಮುದಾಯಗಳು ಸರಕಾರದಿಂದ ಸಿಗಬೇಕಾದ ಸವಲತ್ತು ಮತ್ತು ಸೌಲಭ್ಯಗಳಿಂದ ವಂಚಿತವಾಗಿವೆ. ಹಿಂದುಳಿದವರಿಗೆ ಸವಲತ್ತುಗಳನ್ನು ನೀಡದೆ ವಂಚಿಸಿದ ಕಾಂಗ್ರೆಸ್ ಸರ್ಕಾರ: ಶ್ರೀ ಆರ್. ರಘು ಕೌಟಿಲ್ಯಾ, ರಾಜ್ಯಾಧ್ಯಕ್ಷರು, ಓಬಿಸಿ ಮೋರ್ಚಾ ಕರ್ನಾಟಕ.