BJP Bengaluru North

BJP Bengaluru North

Share

BJP Bengaluru North District

23/05/2026

ದೇಶದಾದ್ಯಂತ ಪಕ್ಷವನ್ನು ಸಂಘಟಿಸುತ್ತಾ, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

22/05/2026
Photos from BJP Karnataka's post 21/05/2026
21/05/2026

ಕಾಂಗ್ರೆಸ್‌ ಮಾಡಿದ್ದು ಸಾಧನಾ ಸಮಾವೇಶವಲ್ಲ, ಸತ್ತ ಸರ್ಕಾರದ ಸಮಾರಾಧನೆ !

ರಾಜ್ಯದ ಅಭಿವೃದ್ಧಿ ಮರೆತ ಕಾಂಗ್ರೆಸ್‌ ಸರ್ಕಾರ ಯಾವುದೇ ನೇಮಕಾತಿ ನಡೆಸಿಲ್ಲ, ಸರಿಯಾಗಿ ನೌಕರರಿಗೆ ವೇತನ ಕೊಡುವ ಯೋಗ್ಯತೆಯೂ ಇಲ್ಲದಾಗಿದೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಸಮಾವೇಶ ಮಾಡಿದೆ.
@
- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು


15/05/2026

ನಮ್ಮ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾದ ಶ್ರೀ ಹರೀಶ್ ಜಿ ಅವರು ಟಿ.ವಿ ಮಾಧ್ಯಮಕ್ಕೆ ನೀಡಿದ ಸಂದರ್ಶನ.

Harish Sriram

11/05/2026

ನನ್ನ ಜೀವನದ ಅತ್ಯಂತ ಹೆಮ್ಮೆಯ ಮತ್ತು ಅವಿಸ್ಮರಣೀಯ ಕ್ಷಣ! 🚩

ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಭರ್ಜರಿ ಜಯಭೇರಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಮಾತನಾಡುವ ಸೌಭಾಗ್ಯ ನನ್ನದಾಯಿತು.

ಪಶ್ಚಿಮ ಬಂಗಾಳದಲ್ಲಿ ನಮ್ಮ ದೇವತುಲ್ಯ ಕಾರ್ಯಕರ್ತರು ಎದುರಿಸಿದ ಸವಾಲುಗಳು, ಅವಮಾನಗಳು ಮತ್ತು ಹಿಂಸಾಚಾರದ ನಡುವೆಯೂ ಸತತ ಪರಿಶ್ರಮದಿಂದ ಇಂದು ಅಲ್ಲಿ ಕೇಸರಿ ಧ್ವಜ ಹಾರಿಸಿದ್ದಾರೆ. ಈ ಜಯ ಕೇವಲ ಒಂದು ರಾಜ್ಯದ ಗೆಲುವಲ್ಲ, ಇದು ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ಧಿಯ ಜಯ. ನಮ್ಮ ಬಂಗಾಳದ ಕಾರ್ಯಕರ್ತರ ಈ ಹೋರಾಟ ನಮಗೆಲ್ಲರಿಗೂ ಸ್ಫೂರ್ತಿ.

ಈ ಸಮಾರಂಭದಲ್ಲಿ ನಮ್ಮ ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು, ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಅವರು, ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್ ಅವರು ಹಾಗೂ ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ಬಂಗಾಳದ ಈ ಗೆಲುವಿನ ಉತ್ಸಾಹದೊಂದಿಗೆ, ನಾವೆಲ್ಲರೂ ಒಗ್ಗಟ್ಟಾಗಿ ಸಂಕಲ್ಪ ಮಾಡೋಣ — ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸಲು, ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಮ್ಮ ಬೆಂಗಳೂರು ಉತ್ತರ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಲಿದ್ದಾರೆ.

ನನ್ನ ಪ್ರಧಾನಿ, ನನ್ನ ಹೆಮ್ಮೆ! 🇮🇳

07/05/2026

ಅರ್ಧ ಶತಮಾನದ ಸುದೀರ್ಘ ರಾಜಕೀಯ ಜೀವನದಲ್ಲಿ, ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ ಜನಾನುರಾಗಿ ಶ್ರೀ ಬಿ.ಎಸ್. ಯಡಿಯೂರಪ್ಪನವರ ಸಾರ್ಥಕ 50 ವರ್ಷಗಳ ಜನಸೇವೆಯ ನಿಮಿತ್ತ ಹಮ್ಮಿಕೊಂಡಿರುವ "BSY ಅಭಿಮಾನೋತ್ಸವ" ಸಮಾರಂಭದ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ನೀವೆಲ್ಲರೂ ಬನ್ನಿ.

ಸ್ಥಳ: ಮಾದಾರ ಚೆನ್ನಯ್ಯ ಗುರುಪೀಠದ ಪಕ್ಕದ ಮೈದಾನ, ಚಿತ್ರದುರ್ಗ.
ದಿನಾಂಕ: 09 ಮೇ 2026, ಶನಿವಾರ.
ಸಮಯ: ಮಧ್ಯಾಹ್ನ 01:00 ಗಂಟೆಗೆ.

ಸರ್ವರಿಗೂ ಆದರದ ಸುಸ್ವಾಗತ!

ಿಮಾನೋತ್ಸವ

Want your business to be the top-listed Government Service in Bangalore?

Click here to claim your Sponsored Listing.

Location

Address


Bjp City Office, Deshpande Bhavan, Malleswaram
Bangalore
560003