BJP Mahila Morcha Dasarahalli Constituency

BJP Mahila Morcha Dasarahalli Constituency

Share

BJP Mahila Morcha Dasarahalli Mandala

Photos from BJP Mahila Morcha Dasarahalli Constituency's post 21/04/2022

ಬಾಗಲಗುಂಟೆ ವಾರ್ಡ್ ಪೋಷಣ ಅಭಿಯಾನ.

Photos from BJP Mahila Morcha Dasarahalli Constituency's post 19/04/2022

ದಾಸರಹಳ್ಳಿ ಮಹಿಳಾ ಮೋರ್ಚಾ ವತಿಯಿಂದ ಪೋಷಣ ಅಭಿಯಾನದ ಅಡಿಯಲ್ಲಿ ನಮ್ಮ ನೆಚ್ಚಿನ ಶ್ರೀಮತಿ ಸುಜಾತಾ ಮುನಿರಾಜು ಅವರು ಹಾಗೂ ದಾಸರಹಳ್ಳಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಉಮಾದೇವಿ ನಾಗರಾಜ್ ರವರು ಕ್ಷೇತ್ರದ ಹಾಗೂ ಜಿಲ್ಲೆಯ ಹಲವು ಪ್ರಮುಖ ಮಹಿಳಾ ಮುಖಂಡರುಗಳು ಅಂಗನವಾಡಿಗಳಿಗೆ ಭೇಟಿ ನೀಡಿ ಅಂಗನವಾಡಿ ಶಿಕ್ಷಕಿಯರು ಹಾಗೂ ಇನ್ನಿತರ ಸಿಬ್ಬಂದಿಗಳಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕಾಂಶದ ಮಹತ್ವ ಹಾಗೂ ಅವರ ಕರ್ತವ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು..

05/04/2022

ಕರ್ನಾಟಕಕ್ಕೆ ಮೋದಿಜಿಯ ಕೊಡುಗೆಗಳೇನು?

1.ಬೀದರ್-ಗುಲ್ಬರ್ಗಾ, ಹಾಸನ್-ಬೆಂಗಳೂರು ರೈಲು ಪೂರ್ಣ. ರೇಲ್ವೇ ಟಿಕೇಟ್ ಕನ್ನಡದಲ್ಲಿ ಮುದ್ರಣ, ರೇಲ್ವೇ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅನುಮತಿ.

2. ಹಿಂದಿನ ಸರ್ಕಾರದಲ್ಲಿ ಹರಿದು ಬಂದ ಹಣದ ಮೊತ್ತ 74,375 ಕೋಟಿ, ಮೋದಿ ಸರ್ಕಾರ ಬಂದ ಮೇಲೆ ಹಣಕಾಸು ಆಯೋಗದಿಂದ ಹರಿದು ಬಂದ ಹಣದ ಮೊತ್ತ 2,42,617 ಕೋಟಿ ಅಂದರೆ 3 ಪಟ್ಟು ಜಾಸ್ತಿ

3.ನಮ್ಮ ಮೆಟ್ರೋಗೆ 5260 ಕೋಟಿ ಅನುದಾನ

4. ಗ್ರಾಮೀಣ ಸ್ವಚ್ಛ ಭಾರತ್ ಮಿಷನ್ ಮುಖೇನ 2640 ಕೋಟಿ, 21933 ಹಳ್ಳಿಗಳು ಬಯಲು ಶೌಚ ಮುಕ್ತ

5. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 2640 ಕೋಟಿ, 271 ನಗರ ಮತ್ತು ಪಟ್ಟಣಗಳು ಆವಾಸ್ ಯೋಜನೆಯ ವ್ಯಾಪ್ತಿಗೆ

6. ರಾಜ್ಯದಲ್ಲಿ 435 ಜನೌಷಧ ಕೇಂದ್ರಗಳು

7. ರಾಜ್ಯದ ರೇಲ್ವೇ ಕ್ಷೇತ್ರದ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಸಂಕಲ್ಪ. 53 ಜೋಡಿ ಹೊಸ ರೈಲುಗಳು, 14 ರೈಲುಗಳ ಅಂತಿಮ ನಿಲ್ದಾಣ ವಿಸ್ತರಣೆ, 252 ಕಿ.ಮೀ ಹೊಸ ಲೈನುಗಳು 2009-14 ವಾರ್ಷಿಕ 23 ಕಿಲೋ ಮೀಟರ್, 2014ರಿಂದೀಚೆ ವಾರ್ಷಿಕ 63 ಕಿ.ಮೀ ಲೈನುಗಳ ನಿರ್ಮಾಣ ಅಂದರೆ ಮೂರು ಪಟ್ಟು ಜಾಸ್ತಿ, 21 ಪಾದಾಚಾರಿ ಬ್ರಿಡ್ಜ್, 2 ಸಬ್ ವೇ, 13 ಎಸ್ಕಲೇಟರ್‌ಗಳು, 40 ಹೊಸ ಸ್ಟೇಷನ್‌ಗಳು,
115 ಸ್ಟೇಷನ್‌ಗಳಲ್ಲಿ high speed internet, 36 ಸ್ಟೇಷನ್‌ಗಳ ಉನ್ನತೀಕರಣಕ್ಕೆ ಅನುಮತಿ.

8. ಯಾದಗೀರಿಯಲ್ಲಿ ರೇಲ್ವೇ ಭೋಗಿ ಕಾರ್ಖಾನೆ, ತುಮಕೂರಿನಲ್ಲಿ ಹೆಲಿಕ್ಯಾಪ್ಟರ್ ನಿರ್ಮಾಣ ಘಟಕ, ಕೇಂದ್ರದ ಟೆಕ್ಸ್‌ಟೈಲ್ ಕ್ಲಸ್ಟರ್‌ಗಳ ಸಂಖ್ಯೆ ಆರು ಅದರಲ್ಲಿ ಮೈಸೂರು ಮೆಗಾ ಸಿಲ್ಕ್ ಕ್ಲಸ್ಟರ್ ಕೂಡಾ ಒಂದು.

9. 17157 ಕಿಮೀ ರಸ್ತೆ ನಿರ್ಮಾಣ ಪೂರ್ತಿ, 9625 ಕಿಮೀ ರಸ್ತೆ ನಿರ್ಮಾಣ ನಡೆಯುತ್ತಿದೆ. ವೆಚ್ಚದಲ್ಲಿ ಕೇಂದ್ರದ್ದೇ ಸಿಂಹಪಾಲು. ಕರ್ನಾಟಕದ ಶಹರುಗಳನ್ನು ಬೇರೆ ಶಹರುಗಳೊಂದಿಗೆ ಜೋಡಿಸಲು ಬೆಂಗಳೂರು ಮಲ್ಲಾಪುರ(323 ಕಿಮೀ), ಬೆಂಗಳೂರು-ಮಂಗಳೂರು( 319ಕಿಮೀ), ಬೆಂಗಳೂರು-ನೆಲ್ಲೂರು(286ಕಿಮೀ), ಮಂಗಳೂರು ರಾಯಚೂರು(421 ಕಿಮೀ), ಬಳ್ಳಾರಿ ಸೋಲಾಪುರ(434 ಕಿಮೀ) ಎಕಾನಾಮಿಕ್ ಕಾರಿಡಾರ್ ನಿರ್ಮಾಣಕ್ಕೆ ಸಂಕಲ್ಪ ಮತ್ತು ಕಾರ್ಯ ನಡೆಯುತ್ತಿದೆ.
ಭಾರತ್ ಮಾಲಾ ಪ್ರಾಜೆಕ್ಟ್ ಅಡಿಯಲ್ಲಿ ಬೆಂಗಳೂರು, ಬೆಳಗಾವಿ, ಚಿತ್ರದುರ್ಗ ವರ್ತುಲ ರಸ್ತೆ, ಬಳ್ಳಾರಿ ಹೊಸಪೇಟೆ ರಾಯಚೂರು ಬಾಗಲಕೋಟೆ ಬೈ ಪಾಸ್ ರಸ್ತೆಗಳು. ಮೈಸೂರು ಬೆಂಗಳೂರು ನಡುವೆ 8 ಲೈನ್ ಹೈವೇ ನಿರ್ಮಾಣಕ್ಕೆ 8600 ಕೋಟಿ ಮಂಜೂರು, ಚೆನ್ನೈ, ಬೆಂಗಳೂರು, ತುಮಕೂರು ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್

10. ಉಡುಪಿ ಹೆಜಮಾಡಿ ಬಂದರು ಅಭಿವೃದ್ಧಿಗೆ 136 ಕೋಟಿ, ಮೀನುಗಾರಿಕಾ ಜಟ್ಟಿಗೆ 230 ಕೋಟಿ ಅನುದಾನ.

11. 117.48 soil health card, ಬೆಳೆ ವಿಮೆಗಾಗಿ ಸುಮಾರು 43 ಲಕ್ಷ ಬಿಡುಗಡೆ, 5 ಪ್ರಮುಖ ನೀರಾವರಿ ಪ್ರಾಜೆಕ್ಟ್‌ಗಳು 4157.51ಕೋಟಿ ಮೀಸಲು, 2014-17ರಲ್ಲಿ 992 ಕೋಟಿ ಬಿಡುಗಡೆ, DAM REHABILITATION AND IMPROVEMENT PROGRAM(DRIP) ಅಡಿಯಲ್ಲಿ ಕರ್ನಾಟಕದ 28 ಆಣೆಕಟ್ಟುಗಳ ಆಯ್ಕೆ 386.14ಕೋಟಿ ಮೀಸಲು, ಅಂತರ್ಜಲ ಮಟ್ಟ ಕುಸಿದು ಹೋದ 18 ಜಿಲ್ಲೆಗಳ 39703ಕೋಟಿ ಚದರ್ ಕಿ.ಮೀ ಭೂಮಿಯನ್ನು ATAL BHUJAL YOJANA ಮೂಲಕ 1232 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ. ಕೃಷ್ಣಾ-ಪೆನ್ನಾರ್, ಬೇಡ್ತಿ-ವರದಾ, ಹೇಮಾವತಿ-ನೇತ್ರಾವತಿ ನದಿ ಜೋಡಣೆಗೆ ಸಂಕಲ್ಪ

12. UDAY ಯೋಜನೆಯಡಿಯಲ್ಲಿ 2016ರಲ್ಲಿ ಕರ್ನಾಟಕ ಸೇರ್ಪಡೆ 2014ರಲ್ಲಿ 14269 ಮೆ ವ್ಯಾಟ್ ವಿದ್ಯುತ್ ಉತ್ಪಾದನೆಯಾದರೆ 2017ರಲ್ಲಿ 21316 ಮೆ ವ್ಯಾಟ್ ವಿದ್ಯುತ್ ಉತ್ಪಾದನೆ.

13. ಕರ್ನಾಟಕಕ್ಕೆ 2017 ಮಾರ್ಚಿನಲ್ಲಿ 171.69 ಕೋಟಿ, 2018 ಡಿಸೆಂಬರ್‌ನಲ್ಲಿ 525 ಕೋಟಿ ನೆರೆ ಪರಿಹಾರ, ಈ ವರ್ಷ 949 ಕೋಟಿ ಬರ ಪರಿಹಾರ

14. ಮಧ್ಯ ಕರ್ನಾಟಕಕ್ಕೆ 6000 ಕೋಟಿ ಅನುದಾನ

15. ಅಟಲ್ ಮಿಷನ್ ಫಾರ್ ರಿಜೆನುವೇಷನ್ ಆ್ಯಂಡ್ ಅರ್ಬನ್ ಟ್ರಾನ್ಸ್‌ಪಾರ್ಮೇಷನ್ ಯೋಜನೆಗೆ 1236 ಕೋಟಿ ಅನುದಾನ ರಾಜ್ಯ ಬಳಸಿದ್ದು 373 ಕೋಟಿ ಮಾತ್ರ!.

14. 17 ವರ್ಷದ ಮೊದಲಿನ ಧಾರವಾಡ IIT ಕನಸು ಮೋದಿ ಬಂದ ಮೇಲೆ ನನಸಾಯಿತು

15. ಕರ್ನಾಟಕಕ್ಕೆ ಹೊಸದಾಗಿ 8 ಹೊಸ ಪಾಸ್‌ಪೋರ್ಟ್ ಸೇವಾಕೇಂದ್ರಗಳ ಒಪ್ಪಿಗೆ ಸಿಕ್ಕಿದೆ.

16. ಕರ್ನಾಟಕಕ್ಕೆ 7 ನಗರಗಳು ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ಸೇರ್ಪಡೆ. ಕೇಂದ್ರದಿಂದ ಹರಿದು ಬಂದ ಹಣ 886 ಕೋಟಿ ರಾಜ್ಯ ಬಳಸಿದ್ದು 86 ಕೋಟಿ ಮಾತ್ರ!

17. ಕರ್ನಾಟಕದ ಒಟ್ಟಾರೆ 224000 ಮೆಟ್ರಿಕ್ ಟನ್ ಪಡಿತರದಲ್ಲಿ ಕೇಂದ್ರದ ಪಾಲು 217403 ಮೆಟ್ರಿಕ್ ಟನ್.

18. ಗುಲ್ಬರ್ಗಾಕ್ಕೆ ಬಂದ ಪ್ರಧಾನಿಗಳು 1000 ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸ ಮತ್ತು ಲೋಕಾರ್ಪಣೆ.

19. ಕಾಳು ಮೆಣಸು ರೈತರು ಬೆಲೆ‌ ಕುಸಿತಕ್ಕೆ ನೊಂದು ಕೇಂದ್ರ ಸರ್ಕಾರದ ಮುಂದೆ ಮನವಿ ಇಟ್ಟಾಗ ಹೊರದೇಶದ ಕಾಳು ಮೆಣಸು ಆಮದನ್ನು ನಿಲ್ಲಿಸಿದರು. ಅಡಿಕೆ ಬೆಳೆಗಾರರದ್ದು ಇದೇ ತರಹದ ಮನವಿ ಬಂದಾಗ ಹೊರದೇಶದ ಅಡಿಕೆಯ ಮೇಲಿನ ಸುಂಕದಲ್ಲಿ ಏರಿಕೆಯಾಯ್ತು.

20. ರಾಜ್ಯಕ್ಕೆ ಹರಿದು ಬಂದ NDRF(National disaster relief fund) 2014-15ರಲ್ಲಿ 271ಕೋಟಿ, 2015-16ರಲ್ಲಿ 1645 ಕೋಟಿ, 2016-17ರಲ್ಲಿ 2292ಕೋಟಿ, 2017-18ರಲ್ಲಿ 913ಕೋಟಿ, 2018-19ರಲ್ಲಿ 525 ಕೋಟಿ.

21. ಹೊಳೆ ಬಾಗಿಲು ಸಿಗಂದೂರು ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ 600 ಕೋಟಿ ಬಿಡುಗಡೆ

22. ಐತಿಹಾಸಿಕ ನಗರಿ ಹಂಪಿಯ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ರಸ್ತೆ, ವೈಪೈ ಸಂಪರ್ಕ, ಸಿಸಿಟಿವಿ ಜೋಡಣೆ
ಬರಹ : ರಾಹುಲ್ ಹಜಾರೆ

30/03/2022

08/03/2022

ಹೆಣ್ಣು ಜಗವ ಬೆಳಗುವ ಶಕ್ತಿ. ಎಲ್ಲಾ ಕ್ಷೇತ್ರಗಳಲ್ಲೂ ಸ್ತ್ರೀ ಶಕ್ತಿ ಪ್ರಜ್ವಲಿಸಲಿ.

ಸಮಸ್ತ ಸ್ತ್ರೀಯರಿಗೆ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

Photos from BJP Mahila Morcha Dasarahalli Constituency's post 04/03/2022
03/03/2022
29/01/2022

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಅವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಆರು ಮಾಸದಲ್ಲಿ ಆರು ನೂರು ಕಲ್ಯಾಣಿಗಳಿಗೆ ಮರು ಜೀವ ನೀಡಿದೆ.

24/01/2022

#ರಾಷ್ಟ್ರೀಯ_ಹೆಣ್ಣು_ಮಕ್ಕಳ_ದಿನಾಚರಣೆ_ಶುಭಾಶಯಗಳು
ಭಾರತ ಸರ್ಕಾರವು ಜನವರಿ 24ನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಘೋಷಿಸಿರುತ್ತದೆ. ಈ ಪ್ರಯುಕ್ತ ರಾಷ್ಟ್ರದಾದ್ಯಂತ ಹೆಣ್ಣು ಮಕ್ಕಳ ಬ್ರೂಣ ಹತ್ಯೆ, ಕೌಟುಂಬಿಕ ದೌರ್ಜನ್ಯ, ಮಹಿಳೆ ಮತ್ತು ಹೆಣ್ಣು ಮಕ್ಕಳ ನ್ಯೂನ ಪೋಷಣೆ, ಶಿಕ್ಷಣ ಮುಂತಾದ ಸಮಸ್ಯೆಗಳ ಬಗ್ಗೆ ಅರಿವನ್ನು ನೀಡಲಾಗುತ್ತಿದೆ. ತಾಯಿಯ ಗರ್ಭದಲ್ಲಿ ಯಾವ ಮಗುವಿದೆ ಎಂಬುದರ ಬಗ್ಗೆ ಬಹಿರಂಗ ಮಾಡುವುದಿಲ್ಲ ಮತ್ತು ಹೆಣ್ಣು ಭ್ರೂಣ ಹತ್ಯೆಗೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ಸರಕಾರ ಸಾರಿದ್ದಾರೆ.

ಈ ಆಚರಣೆಯು ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಾನವನ್ನು ಉತ್ತಮಗೊಳಿಸಲು ಸಹಾಯಕವಾಗಿರುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ತಾರತಮ್ಯ ಹೋಗಲಾಡಿಸುವುದು ಮತ್ತು ಹೆಣ್ಣು ಮಕ್ಕಳಿಗೆ ಮೂಲಭೂತ ಹಕ್ಕು ಹಾಗೂ ಸಮಾನ ಶಿಕ್ಷಣ ಪಡೆಯಲು ಈ ಆಚರಣೆ ಅವಶ್ಯಕತೆ ಇದೆ.

Want your business to be the top-listed Government Service in Bangalore?

Click here to claim your Sponsored Listing.

Location

Website

Address


Bangalore
560057