ಅನೇಕಲ್ ವಿಧಾನಸಭಾ ಕ್ಷೇತ್ರ -ಯೂತ್ ಕಾಂಗ್ರೆಸ್

ಅನೇಕಲ್ ವಿಧಾನಸಭಾ ಕ್ಷೇತ್ರ -ಯೂತ್ ಕಾಂಗ್ರೆಸ್

Share

“ಅನೇಕಲ್ ವಿಧಾನಸಭಾ ಕ್ಷೇತ್ರ ”

13/07/2025

• ಶಕ್ತಿ ಯೋಜನೆಯಡಿಯಲ್ಲಿ 500ನೇ ಕೋಟಿ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣ ಸಾಧನೆಯ ಸಂಭ್ರಮ

 ವಿಶೇಷ ಬಸ್ ಪೂಜಾ ಕಾರ್ಯಕ್ರಮ,
ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ, ತಾಲ್ಲೂಕು ಮತ್ತು ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಒಂದೊಂದು ಬಸ್‌ಗೆ ಪೂಜೆ ನೆರವೇರಿಸಿ ಸಿಹಿ‌ ಹಂಚಿ ಸಾಂಕೇತಿಕವಾಗಿ ಅಚರಣೆ
ಮಹಿಳಾ ಪ್ರಯಾಣಿಕರಿಗೆ ಬಸ್‌ನಲ್ಲಿ ಸ್ವಾಗತದ ರೂಪದಲ್ಲಿ ಗುಲಾಬಿ ಹೂಗಳ ವಿತರಣೆ.

*ಬಸ್ಸುಗಳಲ್ಲಿ ಶಕ್ತಿ 500ನೇ ಕೋಟಿ ಸ್ಟಿಕರ್ ಪ್ರದರ್ಶನ

Photos from ಅನೇಕಲ್ ವಿಧಾನಸಭಾ ಕ್ಷೇತ್ರ -ಯೂತ್ ಕಾಂಗ್ರೆಸ್'s post 10/07/2025

||ಆನೇಕಲ್ ವಿಧಾನಸಭಾ ಕ್ಷೇತ್ರ||

ಇಂದು ದಿನಾಂಕ 09/07/2025 ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವಣ್ಣರವರನ್ನು ಭೇಟಿ ಮಾಡಿ, ಆನೇಕಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪ್ರವೀಣ್ ರವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಸಭೆಯನ್ನು ನಡೆಸಲಾಯಿತ್ತು. ಈ ಸಭೆಯಲ್ಲಿ ಸ್ಥಳೀಯ ಕ್ಷೇತ್ರ, ಬ್ಲಾಕ್ ಮತ್ತು ಪಂಚಾಯಿತಿ ಮಟ್ಟದ ಸಂಘಟನೆ, ಯುವಕರ ನೇಮಕಾತಿಗಳು, ಕುಂದು ಕೊರತೆಗಳು, ಯುವ ಕಾಂಗ್ರೆಸ್ ನ ಚಟುವಟಿಕೆಗಳ ಮತ್ತು ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ, ಜಿಲ್ಲಾ ಅಧ್ಯಕ್ಷರು ಮೋನಿಶ್, ಜಿಲ್ಲಾ ಉಪಾಧ್ಯಕ್ಷರಾದ ಮನೋಹರ್ ರವರು, ಪ್ರಧಾನ ಕಾರ್ಯದರ್ಶಿಗಳಾದ ಡಾ.ಮುರಳಿ ರವರು, ಆನೇಕಲ್ ಕ್ಷೇತ್ರದ ಉಪಾಧ್ಯಕ್ಷರಾದ ಗೋಪಿ ರವರು, ಪ್ರಧಾನ ಕಾರ್ಯದರ್ಶಿಗಳಾದ ರೋಹಿತ್ ರವರು, ಬ್ಲಾಕ್ ಅಧ್ಯಕ್ಷರುಗಳು ಮತ್ತು ಉಪಾಧ್ಯಕ್ಷರುಗಳಾದ ಸಂದೀಪ್, ಮಧು, ವೇಣುಗೋಪಾಲ್, ಗೌತಮ್, ಸೂರ್ಯ, ಚಿರಂಜೀವಿ, ಮತ್ತು ಪವನ್ ಉಪಸ್ಥಿತರಿದ್ದರು.

21/06/2025

ಕಾಂಗ್ರೆಸ್ ಪಕ್ಷದ ಅಧಿನಾಯಕರು, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ "ರಾಹುಲ್ ಗಾಂಧಿ" ಅವರ ಹುಟ್ಟು ಹಬ್ಬದ ಅಂಗವಾಗಿ ಇಂದು ಅನೇಕಲ್ ವಿಧಾನ ಸಭಾ ಕ್ಷೇತ್ರ -ನಾರಾಯಣ ಘಟ್ಟ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ" ವಿದ್ಯಾರ್ಥಿಗಳಿಗೆ "ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿ“ ಕೊಡುವುದರ ಮುಖಾಂತರ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು....

ಈ ಸಂದರ್ಭದಲ್ಲಿ ನಾರಾಯಣ ಘಟ್ಟ ರಾಜೇಶ್, ಬೆಂಗಳೂರು ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ ಮುರಳಿ ಹೆಚ್ ವಿ, ಅನೇಕಲ್ ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ಪ್ರವೀಣ್, ಸರ್ಜಾಪುರ ಬ್ಲಾಕ್ ಅಧ್ಯಕ್ಷರು ವೇಣು,ಅತ್ತಿಬೆಲೆ ಬ್ಲಾಕ್ ಅಧ್ಯಕ್ಷರು ಗೌತಮ್, ಹೆಬ್ಬಗೋಡಿ ಬ್ಲಾಕ್ ಅಧ್ಯಕ್ಷರು ಮಧುಸೂದನ್ ಹಾಗೂ ಅನೇಕಲ್ ಯುವ ಕಾಂಗ್ರೆಸ್ ನ ಪದಾಧಿಕಾರಿಗಳಾದ ಮಹೇಂದ್ರ, ಅಣ್ಣಪ್ಪ ಉಪಸ್ಥಿತರಿದ್ದರು.

04/02/2025

ನರೇಂದ್ರ ಮೋದಿಯವರ 11 ನುಡಿಗಟ್ಟುಗಳು ಮತ್ತು ಸುಳ್ಳುಗಳು👇🏼

1. ವಿದೇಶದಿಂದ ಕಪ್ಪು ಹಣ ಬರುತ್ತೆ, ಎಲ್ಲರಿಗೂ 15 ಲಕ್ಷ ಸಿಗುತ್ತೆ
2. ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡಲಿದೆ
3. ಪೆಟ್ರೋಲ್-ಡೀಸೆಲ್ ಬೆಲೆಯನ್ನು ಕಡಿಮೆ ಮಾಡುತ್ತದೆ
4. ನಾನು ಗಂಗಾ ಮಾತೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತೇನೆ
5. ಮೂಲಸೌಕರ್ಯ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು
6. 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ 2022 ರ ವೇಳೆಗೆ ಉತ್ಪಾದನಾ ವಲಯದಲ್ಲಿ 10 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ
7. 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು
8. ಡಿಮಾನಿಟೈಸೇಶನ್ ನಂತರ 50 ದಿನಗಳ ನಂತರ ಛೇದಕದಲ್ಲಿ ಭೇಟಿಯಾಗಲು ಕೇಳಲಾಯಿತು
9. ಮುಂಬೈ-ಅಹಮದಾಬಾದ್ ಬುಲೆಟ್ ರೈಲು 2022 ರ ವೇಳೆಗೆ ಓಡಲಿದೆ
10. ಪ್ರಧಾನಿ ಎಲ್ಲಾ ರೈತರಿಗೆ ರೈತರ ಪ್ರಯೋಜನವನ್ನು ನೀಡಲಿದ್ದಾರೆ
11. ಪರಾರಿಯಾಗಿರುವ ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ಕರೆತಂದು ದೇಶದ ಜನತೆಗೆ ಒಪ್ಪಿಸಲಾಗುವುದು

ನರೇಂದ್ರ ಮೋದಿಯವರು ಪದಪುಂಜಗಳನ್ನು ನೀಡಿ ದೇಶವನ್ನು ಬಲೆಗೆ ಬೀಳಿಸುತ್ತಿದ್ದಾರೆ.

: ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಶ್ರೀ ಮಲ್ಲಿಕಾರ್ಜುನ ಖರ್ಗೆ

07/05/2023

ಹೆಬ್ಬಗೋಡಿಯಲ್ಲಿ ಬಿ.ಶಿವಣ್ಣರವರ ಪರ ಪ್ರಚಾರ

2023ಕ್ಕೆ ಮತ್ತೆ ಬಿ.ಶಿವಣ್ಣ
#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ

12/04/2023
15/01/2023

ಸಮಸ್ತ ಜನತೆಗೆ 'ಮಕರ ಸಂಕ್ರಾಂತಿ' ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಶುಭ ದಿನದಂದು ಸೂರ್ಯನ ಬೆಳಕು ನಿಮ್ಮನ್ನು ಪ್ರೇರೇಪಿಸಲಿ ಮತ್ತು ನಿಮ್ಮ ಜೀವನವನ್ನು ಈ ವರ್ಷ ಬಹಳಷ್ಟು ಆಶಾವಾದದಿಂದ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

13/01/2023

ಸುಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ನನ್ನ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Attibele And Sarjapura
Bangalore