28/02/2026
https://youtu.be/Rh2Xqm58yso?si=920UJH2HFgkLetl9
NCERT ಪಠ್ಯದಲ್ಲಿ 'ನ್ಯಾಯಾಂಗ ಭ್ರಷ್ಟಾಚಾರ' - ಸುಪ್ರೀಂ ಚಾಟಿ - ಕ್ಷಮೆ ಯಾಚಿಸಿದ ಕೇಂದ್ರ ಸರ್ಕಾರ
⚡ವಾರ್ತಾಭಾರತಿ ಚಾನಲ್⚡Point of ViewwithManjula Masthikatte►► ದಿನದ ಪ್ರಮುಖ ಸುದ್ದಿಗಳ ವಿಶ್ಲೇಷಣೆNCERT ಪಠ್ಯದಲ್ಲಿ 'ನ್ಯಾಯಾಂಗ ಭ್ರಷ್ಟಾಚಾರ' - ಸುಪ್ರೀಂ .....
28/02/2026
https://youtu.be/QJoi_6hGRHA?si=e5TdOrEQwb-41Cka
ಗೋರಕ್ಷಣೆ vs ಗೋಮಾಂಸ ರಫ್ತು : Allana Group ಬಿಜೆಪಿಗೆ 30 ಕೋಟಿ ದೇಣಿಗೆ ನೀಡಿದ್ದೇಕೆ? | BJP
2014ರ ಭಾಷಣ vs 2025ರ ವಾಸ್ತವ : ಐಟಿ ದಾಳಿ ಬಳಿಕ ಹೆಚ್ಚಿದ ಅಲ್ಲಾನಾ ಗ್ರೂಪ್ ದೇಣಿಗೆ? ► ಚುನಾವಣಾ ಆಯೋಗದ ದಾಖಲೆಯಿಂದ ಬಹಿರಂಗವಾದ ಸತ್ಯ ಏನು ? ...
12/02/2026
Aviation Investigation Report: ಇಟಲಿಯ ಕೊರಿಯರ್ ಡೆಲ್ಲಾ ಸೆರಾ ವರದಿ ಪ್ರಕಾರ, ಅಹಮದಾಬಾದ್– ಲಂಡನ್ ಎಐ–171 ವಿಮಾನ ಪತನಕ್ಕೆ ಪೈಲಟ್ ಉದ್ದೇಶಪೂರ್ವಕವಾಗಿ ಇಂಧನ ಗುಂಡಿ ಬಂದ್ ಮಾಡಿದ್ದೇ ಕಾರಣ ಎಂದು ಹೇಳಲಾಗಿದೆ.
12/01/2026
Bedsheets in Kerala have the day written on them for change every day.
26/01/2025
ಹೊಯ್ಸಳರ ಕಾಲದ ಸುಂದರ ವಿಗ್ರಹ ಎಚ್ಡಿ ಕೋಟೆ ಸಮೀಪದ ಕ್ಯಾತನಹಳ್ಳಿಯಲ್ಲಿ ಪತ್ತೆ
22/12/2024
ನಿರ್ಭೀತ, ನಿಷ್ಪಕ್ಷಪಾತ ಪತ್ರಕರ್ತನ ಪಾತ್ರದಲ್ಲಿ ಶಂಕರ್ ನಾಗ್, ತಾವೇ ನಾಯಕನಾಗಿ ನಟಿಸಿ, ನಿರ್ದೇಶಿಸಿದ ಚಲನಚಿತ್ರ ಆಕ್ಸಿಡೆಂಟ್. 1984 ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಶಂಕರ್ ನಾಗ್ ರವರ ಸಹೋದರ ಅನಂತ್ ನಾಗ್ ಮತ್ತು ಅವರ ಪತ್ನಿ ಅರುಂಧತಿ ನಾಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭಾವಿ ರಾಜಕಾರಣಿಯ ಮಗ (ಅನಂತ್ ನಾಗ್) ರಸ್ತೆಬದಿ ಮಲಗಿದ್ದ ಜನರ ಗುಂಪಿನ ಮೇಲೆ ಕಾರು ಹರಿಸಿ, ಅವೆ ಸಾವಿಗೆ ಕಾರಣವಾದಾಗ, ಪ್ರಭಾವಿ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ಕೇಸ್ ಮುಚ್ಚಿಹಾಕಲು ಪ್ರಯತ್ನಿಸುವಾಗ, ತನಿಖಾ ಪತ್ರಕರ್ತ (ಶಂಕರ್ ನಾಗ್) ಮತ್ತು ಪೋಲೀಸ್ ಅಧಿಕಾರಿ (ರಮೇಶ್ ಭಟ್) ರವರು ಜೊತೆಗೂಡಿ ಸತ್ಯವನ್ನು ಬಹಿರಂಗಪಡಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸುತ್ತಾರೆ.
~ಪರಿಸರ ಪರಿವಾರ
📸 National Film Archives of India
#ಶಂಕರ್_ನಾಗ್ #ಕರಾಟೆಕಿಂಗ್
02/12/2024
is proud to be conferred with the Best Corporate Promoting Sports Development (Public) award at the FICCI Indian Sports Awards 2024. The award was received by Mr Bibhuti Ranjan Pradhan, ED(CC, Branding & Coordination ) celebrating IndianOil's commitment to propelling towards a sporting nation through initiatives like IndianOil Shakti, Road to Paralympics, IndianOil DivyaShakti, Parivartan and Nayi Disha. IOCian, Ms Manjusha Kanwar, former international badminton star and Dhyanchand Awardee was also present on the occasion.
17/12/2023
ಸೋಪಾನ ಬಾವಿ
📍 ಹಂದನಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ
ವೇಶ್ಯೆಯರು ಕಟ್ಟಿದ ಹಲವು ಕೆರೆ ಕಟ್ಟೆಗಳು ಕರ್ನಾಟಕದಲ್ಲಿ ಬಹಳಷ್ಟು ಕಡೆ ಇವೆ. ಅಂತಹ ಒಂದು ನೀರಿನ ಮೂಲ ಕೇವಲ ನೀರಿನ ಮೂಲಕ್ಕಷ್ಟೆಯಲ್ಲದೆ
ಕೆತ್ತನೆಯ ಕಾರಣದಿಂದ ಬಹಳ ವಿಶಿಷ್ಟ ಸ್ಥಾನ ಪಡೆದಿದೆ. ಅದೇ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆಯ ಸೋಪಾನ ಬಾವಿ!
ಹತ್ತಾರು ಗುಂಟೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಬಾವಿ ಕಟ್ಟಿಸಿದ್ದು ಒಬ್ಬಳು ವೇಶ್ಯೆ. ಈಕೆಯ ಕುರಿತು ಜನಪದ ಹಾಡುಗಳನ್ನು ಕಟ್ಟಲಾಗಿದೆ. ಬಾವಿ ಒಳಗೆ ನಾಲ್ಕು ಸುಂದರ ಕಲ್ಲಿನ ಮಂಟಪಗಳಿವೆ.
ಈ ಮಂಟಪ ತಲುಪಲು ಮೂರು ಕಡೆಗಳಿಂದ ಮೂರು ದಾರಿಗಳಿವೆ. ಒಂದೊಂದು ದಾರಿಯೂ ಮತ್ತೇ ನಾಲ್ಕು ದಾರಿಗಳಾಗಿ ಟಿಸಿಲಾಗಿ 12 ದಾರಿಗಳೂ ಕೊನೆಯಲ್ಲಿ ಮಂಟಪದ ಬಾವಿ ಸೇರುವುದು ಇಲ್ಲಿನ ವಿಶೇಷ. ಹೀಗಾಗಿ ಇದನ್ನು ಹನ್ನೆರಡು ದಾರಿಗಳ ಸೋಪಾನ ಬಾವಿ ಎಂದೇ ಜನ ಕರೆಯುತ್ತಾರೆ.
ಭೀಕರ ಬರಗಾಲದಿಂದ ಜನರು ಕಂಗಲಾದಾಗ ಪಾಳೇಗಾರನ ಪ್ರೇಯಸಿಯಾಗಿದ್ದ, ವೇಶ್ಯೆ ಚನ್ನಮ್ಮ ನಾಗತಿ ಎಂಬಾಕೆ ಈ ಬಾವಿ ಕಟ್ಟಿಸಿದಳು ಎಂಬ ಪ್ರತೀತಿ ಇದೆ. ತಾನು ಗಳಿಸಿದ್ದ ಅಷ್ಟು ಸಂಪತ್ತನ್ನು ಬಾವಿಗಾಗಿ ವಿನಿಯೋಗಿಸಿ ಇಲ್ಲಿನ ನೀರಿನ ಬರ ನೀಗಿಸಿದಳು ಎಂಬುದು ಕಥೆಯ ಸಾರಾಂಶ. ಬಾವಿ ಕಟ್ಟಲು ನಾಡಿನ ಮೂಲೆಗಳಿಂದ ಪ್ರಸಿದ್ಧ ಶಿಲ್ಪಿಗಳನ್ನು ಕರೆಯಿಸಿ ಬಾವಿ ಕಟ್ಟಿಸಿದ ಬಳಿಕ ಗಂಗೆಗೆ ತನ್ನನ್ನು ತಾನು ಆತ್ಮಾರ್ಪಣೆ ಮಾಡಿಕೊಂಡಳು ಎಂಬ ಕತೆಗಳಿವೆ.
ಸೋಪಾನ ಬಾವಿಗೆ ಮಹಿಳೆಯರು ಪೂಜೆ ಸಲ್ಲಿಸುವುದು ವಾಡಿಕೆಯಾಗಿ ಬಂದಿದೆ. ಆದರೆ ಪೂಜೆ ಸಲ್ಲಿಸುವಷ್ಟೆ ಭಕ್ತಿ ಬಾವಿ ನಿರ್ವಹಣೆಯ ಕಡೆಗೆ ತೋರಿಲ್ಲ. ಹೀಗಾಗಿ ಬಾವಿ ತುಂಬೆಲ್ಲ ಅಂತರಗಂಗೆ ಬೆಳೆದು ವಿನಾಶದಂಚಿಗೆ ಸಾಗುತ್ತಿದೆ. ಹಂದನಕೆರೆಯ ಈ ಸೋಪಾನ ಬಾವಿ ಕುರಿತು ಇತಿಹಾಸಕಾರ ಅಬ್ದುಲ್ ಹಮೀದ್ ಮೊಟ್ಟಮೊದಲು ಬೆಳಕು ಚೆಲ್ಲಿದರು. ಹಂದನಕೆರೆಯ ಮೋಡಿ ಮರೆಯಾಗಿರುವಂತೆ ಸೋಪಾನ ಬಾವಿಯೂ ಮರೆಯಾಗುವ ಮುನ್ನ ಅದನ್ನು ಕಾಪಾಡಿಕೊಳ್ಳಬೇಕಾಗಿದೆ.
~ ಪರಿಸರ ಪರಿವಾರ
Source- ಸಿ.ಕೆ.ಮಹೇಂದ್ರ (ಪ್ರಜಾವಾಣಿ ಲೇಖನ)
#ಹಂದನಕೆರೆ #ಸೋಪಾನಬಾವಿ
17/12/2023
1881 ರಿಂದ 1923 ರ ವರೆಗೆ... ಹತ್ತನೇ ಚಾಮರಾಜ ಒಡೆಯರೂ... ವಾಣಿ ವಿಲಾಸ ಸನ್ನಿಧಾನವೂ... ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರೂ ಸೇರಿ ಅಭಿವೃದ್ಧಿ ಪಡಿಸಿದ ಕೆರೆಗಳ ಸಂಖ್ಯೆ...
ಏಳು ಸಾವಿರದ ನಾನೂರು...
ಯಸ್... ಸರಿಯಾಗಿಯೇ ಓದಿದಿರಿ... ಬರೋಬ್ಬರಿ ಏಳು ಸಾವಿರದ ನಾನೂರು ಕೆರೆಗಳನ್ನು ಅಭಿವೃದ್ಧಿ ಪಡಿಸಿದ ದಾಖಲೆ...
Imperial gazette of India
Almost every valley contains a chain of tanks. The first overflowing into the second and the second into the third and so on until the terminal tank is filled.
ಮಹಾ ಮೈಸೂರು ಸಂಸ್ಥಾನ "ಒಂದು ಜೀವಂತ ದಂತಕಥೆ" ಅಂತ ನಾನು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳ್ಕೊಳೋದಕ್ಕೆ ಹತ್ತು ಸಾವಿರ ಕಾರಣಗಳಲ್ಲಿ ಇದೂ ಒಂದು...
PC: Arenalli Shivashankar Dharmendra Kumar