23/01/2026
ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಕ್ರಾಂತಿಕಾರಿ ನಾಯಕ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಗೌರವ ನಮನಗಳು. ಅವರ ಸದೃಢ ರಾಷ್ಟ್ರ ನಿರ್ಮಾಣದ ಕನಸು, ಧೈರ್ಯ ಮತ್ತು ಅಚಲ ದೇಶಪ್ರೇಮದ ಮನೋಭಾವ ಎಂದಿಗೂ ಅವಿಸ್ಮರಣೀಯ.
17/09/2025
ನಾಡಿನ ಸಮಸ್ತ ಜನತೆಗೆ ಸಕಲ ಸೃಷ್ಟಿಕರ್ತ, ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಶುಭಾಶಯಗಳು.
17/09/2025
ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಶ್ರಮಿಸಿದ ಮಹನೀಯರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ, ನಾಡಿನ ಸಮಸ್ತ ಜನತೆಗೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
27/08/2025
“ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ”
ನಾಡಿನ ಸಮಸ್ತ ಜನತೆಗೆ “ಗಣೇಶ” ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನ ವಿನಾಶಕ ಗಣಪತಿ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ, ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
|
14/08/2025
ಸಮಸ್ತರಿಗೂ 79 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸುಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸೋಣ. ಸಮೃದ್ಧ, ಸಶಕ್ತ ನವಭಾರತದ ನಿರ್ಮಾಣದ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಮುನ್ನಡೆಯೋಣ.
09/08/2025
ನಾಡಿನ ಸಮಸ್ತ ಜನತೆಗೆ ಪ್ರೀತಿ ಹಾಗೂ ಸಹೋದರತೆಯ ಸಂಕೇತವಾದ ಪವಿತ್ರ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. 💐
21/06/2025
ಜೂನ್ 21 ; ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ದಿನ.
ಯೋಗವು ದೇಹ, ಮನಸ್ಸು ಮತ್ತು ಶ್ವಾಸದ ನಡುವೆ ಸಮನ್ವಯ ಸಾಧಿಸುವ ಶಕ್ತಿಯುತ ವಿದ್ಯೆ. ಭಾರತೀಯ ಪರಂಪರೆಯ ಈ ಪವಿತ್ರ ಜ್ಞಾನಪದ್ಧತಿ, ಇಂದು ಜಗತ್ತಿನ ನೂರಾರು ದೇಶಗಳಲ್ಲಿನ ಕೋಟ್ಯಂತರ ಜನರ ಆರೋಗ್ಯರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ.
ಯೋಗದ ನಿತ್ಯಾಭ್ಯಾಸದಿಂದ, ಈ ತಂತ್ರಜ್ಞಾನದ ಯುಗದಲ್ಲೂ ಆಂತರಿಕ ಶಾಂತಿ ಮತ್ತು ಸಮತೋಲನವನ್ನು ಹೊಂದಬಹುದು. ಯೋಗದ ಮೂಲಕ ರೋಗಮುಕ್ತ, ನಿರಾತಂಕ ಮತ್ತು ನೆಮ್ಮದಿಯ ಬದುಕು ಕಂಡುಕೊಳ್ಳೋಣ!
10/05/2025
ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧಿಸಿ ಸಾಕ್ಷಾತ್ಕಾರ ಪಡೆದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯ ಹಾರ್ದಿಕ ಶುಭಾಶಯಗಳು. 💐💐
ತಮ್ಮ ದುಃಖವನ್ನೆಲ್ಲ ಮರೆತು ಲೋಕದ ಹಿತಕಾಯ್ದ ತ್ಯಾಗಮಯಿ ತಾಯಿ ಮಲ್ಲಮ್ಮನವರು — ಶರಣತತ್ತ್ವಕ್ಕೆ ಜೀವಂತ ಪ್ರತೀಕ, ಶ್ರದ್ಧೆ, ಧರ್ಮ ಮತ್ತು ಶೀಲತೆಗೆ ದಾರಿದೀಪ!
ಸಮಸ್ತ ಸ್ತ್ರೀಕುಲಕ್ಕೂ ಅವರು ಸರ್ವಕಾಲಕ್ಕೂ ಆದರ್ಶ!
#ಹೇಮರೆಡ್ಡಿಮಲ್ಲಮ್ಮ
31/03/2025
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು
ಈ ಹಬ್ಬ ದೇಶದ ಐಕ್ಯತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲಿ, ನಾಡಿನಲ್ಲಿ ಶಾಂತಿ ಸಹಬಾಳ್ವೆ ಸ್ಥಾಪಿಸಲಿ ಹಾಗೂ ಸರ್ವರಿಗೂ ಸುಖ, ಸಮೃದ್ಧಿ, ಉತ್ತಮ ಆರೋಗ್ಯ ನೀಡಲಿ ಎಂದು ಆಶಿಸುತ್ತೇನೆ.
30/03/2025
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಈ ಯುಗಾದಿ ತಮ್ಮೆಲ್ಲರ ಜೀವನದಲ್ಲಿ ಹೊಸತನ, ಹೊಸ ಚೈತನ್ಯ, ಹೊಸ ಹುರುಪನ್ನು ಹೊತ್ತು ತರಲಿ. ಸುಖ, ಶಾಂತಿ, ಸಮೃದ್ಧಿ ಒಲಿದುಬರಲಿ. ಸುಖ ಶಾಂತಿ ಸಮೃದ್ಧಿ ನೆಲೆಸಲಿ.
#ಯುಗಾದಿ
25/03/2025
ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನಿಮಿತ್ಯವಾಗಿ ಹುಮನಾಬಾದ ಪಟ್ಟಣದ ಮುಖಾಂತರ ಬೀದರ ನಗರಕ್ಕೆ ಪ್ರಯಾಣ ಬೆಳೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸನ್ಮಾನ್ಯ *ಶ್ರೀ ಗೋಪಿನಾಥ್ ಪಾಲನಿಯಪ್ಪನ್* ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ *ವಸಂತಕುಮಾರ* ರವರನ್ನ ಹುಮನಾಬಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ *ಶ್ರೀ ರಾಜಶೇಖರ ಬಿ ಪಾಟೀಲ್* ರವರು ವಿಧಾನ ಪರಿಷತ್ ಸದಸ್ಯರಾದ ಶ್ರೀ *ಡಾ.ಚಂದ್ರಶೇಖರ ಬಿ ಪಾಟೀಲ್* ರವರು *ಶ್ರೀ ಭೀಮರಾವ ಬಿ ಪಾಟೀಲ್* ರವರು ಅಧ್ಯಕ್ಷರು ಜಿಲ್ಲಾ ಸಹಕಾರ ಯೂನಿಯನ್ ನಿ ಹಾಗು ಉಪಾಧ್ಯಕ್ಷರು ಡಿ.ಸಿ.ಸಿ ಬ್ಯಾಂಕ್ ಯುವನಾಯಕರಾದ *ಶ್ರೀ ಅಭಿಷೇಕ ಆರ್ ಪಾಟೀಲ್* ರವರು ಸ್ವಾಗತಕೊರಿ ಸತ್ಕರಿಸಿದರು.