28/05/2026
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ
ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು
ತ್ಯಾಗ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾದ ಈ ಪವಿತ್ರ ಹಬ್ಬವು
ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ.
ಆಹಾರ ಇಲಾಖೆ ವತಿಯಿಂದ
ಪ್ರೀತಿಯ ಈದ್ ಉಲ್ ಅಧಾ ಶುಭಾಶಯಗಳು
15/05/2026
ಕರ್ನಾಟಕ ರಾಜ್ಯದ ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕ್ರಿಯಾಶೀಲ ನಾಯಕರಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಜನಪರ ಆಡಳಿತದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪುವಂತಾಗಲಿ ಎನ್ನುವ ನಿಮ್ಮ ಆಶಯ ನಮಗೆ ಸದಾ ಪ್ರೇರಣೆ.
10/05/2026
ನಮ್ಮ ಬದುಕಿನ ಮೊದಲ ಪೌಷ್ಟಿಕತಜ್ಞೆ, ನಿಸ್ವಾರ್ಥ ಸೇವೆಯ ಪ್ರತಿರೂಪವೇ ತಾಯಿ. ಕುಟುಂಬದ ಪ್ರತಿಯೊಬ್ಬರ ಆರೋಗ್ಯ ಮತ್ತು ಹಸಿವನ್ನು ನೀಗಿಸುವ ತಾಯಿಯ ಶ್ರಮ ಅಪಾರ.
ಮಮತೆ, ವಾತ್ಸಲ್ಯ, ಮತ್ತು ತ್ಯಾಗದ ಪ್ರತಿರೂಪವಾಗಿರುವ ವಿಶ್ವದ ಎಲ್ಲಾ ತಾಯಂದಿರಿಗೆ "ವಿಶ್ವ ತಾಯಂದಿರ ದಿನದ" ಹೃತ್ತೂರ್ವಕ ಶುಭಾಶಯಗಳು.
#ಮದರ್ಸ್ಡೇ #ತಾಯಿ
10/05/2026
ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಮಾನ್ಯ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರಾದ ಶ್ರೀ ಡಿ. ಸುಧಾಕರ್ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ.
ತಮ್ಮ ಸರಳ ವ್ಯಕ್ತಿತ್ವ, ಜನಪರ ಕಾಳಜಿ ಹಾಗೂ ನಿಷ್ಠಾವಂತ ಸಾರ್ವಜನಿಕ ಸೇವೆಯ ಮೂಲಕ ನಾಡಿನ ಜನರ ಮನ ಗೆದ್ದಿದ್ದ ಅವರು, ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆಯು ಕರ್ನಾಟಕದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಸ್ಥರು ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ಓಂ ಶಾಂತಿ.🙏
07/05/2026
ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ, ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಗುರುದೇವ Rabindranath Tagore ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.
ಅವರ ಸಾಹಿತ್ಯ, ಚಿಂತನೆಗಳು ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ.
01/05/2026
🌍 INTERNATIONAL LABOUR DAY | ವಿಶ್ವ ಕಾರ್ಮಿಕ ದಿನ 🌾
ದೇಶದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರಿಗೆ ಹೃತ್ಪೂರ್ವಕ ವಂದನೆಗಳು ಹಾಗೂ ವಿಶ್ವ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು.
ಅನ್ನದಾತರು, ಕಾರ್ಮಿಕರು ಮತ್ತು ಶ್ರಮಜೀವಿಗಳ ಪರಿಶ್ರಮವೇ ನಮ್ಮ ಸಮಾಜದ ಶಕ್ತಿ.
Let us salute the tireless efforts of millions of workers who build our nation with dedication and hard work. Their contribution is the backbone of our progress.
Happy International Labour Day!
NationBuilders May1 India Shramika AnnaBhagya Siddaramaiah DKShivakumar FoodAndCivil FoodandCivilsupplies govtofkarnataka khmuniyappa Minister
01/05/2026
🌍 INTERNATIONAL LABOUR DAY | ವಿಶ್ವ ಕಾರ್ಮಿಕ ದಿನ 🌾
ದೇಶದ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರಿಗೆ ಹೃತ್ಪೂರ್ವಕ ವಂದನೆಗಳು ಹಾಗೂ ವಿಶ್ವ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು.
ಅನ್ನದಾತರು, ಕಾರ್ಮಿಕರು ಮತ್ತು ಶ್ರಮಜೀವಿಗಳ ಪರಿಶ್ರಮವೇ ನಮ್ಮ ಸಮಾಜದ ಶಕ್ತಿ.
Let us salute the tireless efforts of millions of workers who build our nation with dedication and hard work. Their contribution is the backbone of our progress.
Happy International Labour Day!
20/04/2026
ನಾಡಿನ ಸಮಸ್ತ ಜನತೆಗೆ ಜಗಜ್ಯೋತಿ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು.
ಸಮಾನತೆ, ಸಹೋದರತ್ವ ಮತ್ತು ಶಾಂತಿಯ ಸಂದೇಶ ಸಾರಿದ ಬಸವಣ್ಣನವರ ಬೋಧನೆಗಳು ಎಲ್ಲಾ ಕಾಲಕ್ಕೂ ಅನುಕರಣೀಯ. “ಕಾಯಕವೇ ಕೈಲಾಸ” ಎಂಬ ತತ್ವದೊಂದಿಗೆ ಸಮಾನತೆ ಮತ್ತು ಸೇವಾ ಮನೋಭಾವದ ಸಮಾಜ ನಿರ್ಮಾಣಕ್ಕೆ ನಾವು ಕೈಜೋಡಿಸೋಣ.
14/04/2026
ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಮೇಲೆ ಆಧಾರಿತ ಸಮಾಜ ನಿರ್ಮಾಣಕ್ಕೆ ಅವರು ನೀಡಿದ ದಾರಿದೀಪ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ.