DYFI Karnataka

DYFI Karnataka

Share

Democratic Youth Federation of India (DYFI) is a youth organization in India. DYFI is a forward looking and progressive youth organization .

DYFI was formed in Ludhiana on 3rd November 1980. Prior to formation, the leaders of KSYF of Kerala, Socialist Valibar organisation of Tamil Nadu, Nav Jawan Sabha of Punjab, DYF of West Bengal etc assembled in Delhi and gave shape to a Preparatory Committee. This committee conducted a conference in Ludhiana from 1st to 3rd November for the formation of DYFI. The constitution and programme of the n

09/04/2026

ವಿದ್ಯಾರ್ಥಿಯಾಗಿದ್ದಾಗಲೇ ಭೂ ಮಾಲೀಕರ ವಿರುದ್ಧದ ಹೋರಾಟದಲ್ಲಿ ಆ್ಯಸಿಡ್ ಧಾಳಿಗೆ ಒಳಗಾಗಿ ಬದುಕುಳಿದಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಕಾಂ.ವೆಂಕಟೇಶ ಕೋಣಿ (74) ರವರು ಕರಾವಳಿ ಕೃಷಿ ಕೂಲಿಕಾರರ ಒಂದು ದಿಟ್ಟ ಧ್ವನಿ.

ಕಳೆದ ಎರಡು ವರ್ಷಗಳಿಂದ ತೀವ್ರ ಸ್ವರೂಪದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ನಮ್ಮನ್ನು ಅಗಲಿದ್ದಾರೆ. ಈ ಮೂಲಕ ಒಬ್ಬ ಹಿರಿಯ ಕಮ್ಯುನಿಸ್ಟ್ ನಾಯಕರು ಹಾಗೂ ಕೃಷಿ ಕೂಲಿಕಾರರ ಬಹಳ ದೊಡ್ಡ ಗಟ್ಟಿ ಧ್ವನಿಯನ್ನು ವಿಶೇಷವಾಗಿ ಕರಾವಳಿ ಹಾಗೂ ಕರ್ನಾಟಕ ರಾಜ್ಯ ಕಳೆದುಕೊಂಡಂತಾಗಿದೆ.

ಕಾಂ. ವೆಂಕಟೇಶ ಕೋಣಿ ರವರ ಇಚ್ಛೆಯಂತೆ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದೇಹ ದಾನ ಮಾಡಲಾಗುತ್ತಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಯ ಕೆಂಪು ವಂದನೆಗಳು 🌹✊😥

23/03/2026

ಮಾರ್ಚ್ 23 ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಹುತಾತ್ಮ ದಿನ

23/03/2026

“ವ್ಯಕ್ತಿಗಳನ್ನು ಕೊಲ್ಲುವುದು ಸುಲಭ, ಆದರೆ
ನೀವು ಚಿಂತನೆಗಳನ್ನು ಕೊಲ್ಲಲಾರಿರಿ.
ಬೃಹತ್ ಸಾಮ್ರಾಜ್ಯಗಳು ಉರುಳಿ ಹೋಗಿವೆ,
ಆದರೆ ಚಿಂತನೆಗಳು ಬದುಕುಳಿದಿವೆ."
~ ಭಗತ್ ಸಿಂಗ್.
#ಭಗತಸಿಂಗ್ #ರಾಜಗುರು #ಸುಖದೇವ್

#ಡಿವೈಎಫ್ಐ

19/03/2026

ಯುಗಾದಿ ಹಬ್ಬದ ಶುಭಾಶಯಗಳು

03/03/2026

ಕಾಮ್ರೇಡ್ ನಿತ್ಯಾನಂದಸ್ವಾಮಿಯವರಿಗೆ ಡಿವೈಎಫ್ಐ ರಾಜ್ಯ ಸಮಿತಿ ವತಿಯಿಂದ ಕ್ರಾಂತಿಕಾರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

02/03/2026

ಇಂದು ನಿಧನರಾದ ಹಿರಿಯ ಕಾಮ್ರೇಡ್ ನಿತ್ಯಾನಂದ ಸ್ವಾಮಿ ಅವರಿಗೆ ಭಾವಪೂರ್ಣ ಕೆಂಪು ಶ್ರದ್ಧಾಂಜಲಿಗಳು 🌹✊🌹

ಡಿವೈಎಫ್ಐ ಕರ್ನಾಟಕ

25/02/2026
14/02/2026

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು

14/02/2026

ಫೆಬ್ರವರಿ ೧೪ ಪುಲ್ವಾಮಾ ಧಾಳಿ....
ಹುತಾತ್ಮರಿಗೆ ನಮನಗಳು ..

Photos from DYFI Karnataka's post 19/01/2026

ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಡಿವೈಎಫ್ಐ ನೇತೃತ್ವದಲ್ಲಿ ದೇವದುರ್ಗ ತಾಲೂಕ ಸಮಾವೇಶ ಮಾಡಲಾಯಿತು.

ದೇವದುರ್ಗ: ಇಂದಿನ ರಾಜಕೀಯ ವಾತಾವರಣದಲ್ಲಿ ಕೆಲವು ರಾಜಕಾರಣಿಗಳು ಮುಸ್ಲಿಂ ಸಮುದಾಯವನ್ನು ನಿರಂತರವಾಗಿ “ಪಾಕಿಸ್ತಾನಿ” ಎಂದು ಕರೆಯುವ ಮೂಲಕ ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯ ಬೀಜ ಬಿತ್ತುತ್ತಿದ್ದಾರೆ. ಇಂತಹ ಅವಹೇಳನಕಾರಿ ಹೇಳಿಕೆಗಳ ನಡುವೆ ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ಹಲವಾರು ಸವಾಲುಗಳನ್ನು ಎದುರಿಸುವ ಸ್ಥಿತಿಗೆ ತಲುಪಿವೆ ಎಂದು ಕರಾವಳಿ ಭಾಗದ ಡಿವೈಎಫ್ಐ ಮಾಜಿ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಪಾಳ್ಳ ಮಾತನಾಡಿದರು.

ನಾವು ಈ ದೇಶದ ನಾಗರಿಕರು ನಮ್ಮ ನಿಷ್ಠೆ, ಶ್ರಮ ಮತ್ತು ಕೊಡುಗೆಗಳ ಬಗ್ಗೆ ಅನುಮಾನ ಸೃಷ್ಟಿಸುವುದು ಕೇವಲ ಅಸಹನೀಯವಲ್ಲ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವೂ ಹೌದು. ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಸಮಾಜ ಒಟ್ಟಾಗಿ ನಿಲ್ಲಬೇಕು ಎಂಬ ಸಂದೇಶವನ್ನು ಈ ಸಮಾವೇಶದ ಮೂಲಕ ಸ್ಪಷ್ಟ ಸಂದೇಶ ನೀಡಬೇಕಾಗಿದೆ ಎಂದರು ಹೇಳಿದರು.

ಸಮಾವೇಶದಲ್ಲಿ ಡಿವೈಎಫ್‌ಐ ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರಾದ್ ಸೇರಿದಂತೆ ನರಸಣ್ಣ ನಾಯಕ, ಮುರ್ತುಜ ಚೌದ್ರಿ, ಜಾವೀದ್ ಖುರೇಷಿ, ಡಾ. ನೂರು, ಗಿರಿಯಪ್ಪ ಪೂಜಾರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಬ್ಬೀರ್ ಜಾಲಹಳ್ಳಿ, ಶಕುಂತಲಾ ದೇಸಾಯಿ, ರಮಾದೇವಿ, ರೀಯಾಜ್ ಆರ್ತಿ, ಮೌನೆಶ ಜಾಲಹಳ್ಳಿ, ಮಹಾಲಿಂಗ್ ದೊಡ್ಡಮನಿ, ರಾಜು ನಾಯಕ, ಮಕ್ತುಮ್ ಭಾಷಾ, ಅಬ್ದುಲ್ ಅಮೀದ್ ಸಾಬ್, ಎಂ.ಎ. ಕಲಿಂ, ರಹೀಂಸಾಬ್, ಶಾಮೀದ್ ಸಾಬ್, ದಾವುದ್ ಪಾಂಡು ಸಾಬ್, ಯೂಸುಫ್ ಸಾಬ್, ದಿಲ್ ಶಾದ್, ತಿಮ್ಮು ನಾಯಕ, ಪಾಂಡು ನಾಯಕ, ಶಿವು ಸೇರಿದಂತೆ ಅನೇಕ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು.

Photos from DYFI Karnataka's post 27/12/2025

ಕರ್ನಾಟಕದ ಜನತೆಗೆ ಉತ್ತರಾದಾಯಿಯಾಗಿರಬೇಕಾದ ರಾಜ್ಯ ಕಾಂಗ್ರೇಸ್ ಸರಕಾರವು, ಉತ್ತರ ಪ್ರದೇಶದ ಬಿಜೆಪಿ ಸರಕಾರಕ್ಕೆ ದ ಮಾದರಿಯಲ್ಲಿ ಬಡಜನರು ವಾಸಿಸುವ ಸ್ಲಂ ಮನೆಗಳನ್ನು ಏಕಾಏಕಿ ಯಾವುದೇ ಮುನ್ಸೂಚನೆ ನೀಡದೇ ಬುಲ್ಡೋಜರ್ ನಿಂದ ನೆಲಸಮ ಮಾಡಿರುವ ಬೆಂಗಳೂರಿನ ಕೋಗಿಲು‌ ಲೇ ಔಟ್ ಪ್ರದೇಶಕ್ಕೆ ಇಂದು ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರು ಹಾಗೂ ರಾಜ್ಯಸಭಾ‌ ಸದಸ್ಯರಾದ ಕಾಮ್ರೇಡ್ ಎ.ಎ.‌ರಹೀಮ್‌ ಅವರ ನೇತೃತ್ವದಲ್ಲಿ ನಿಯೋಗವು ಭೇಟಿ ನೀಡಿ, ಸಂತ್ರಸ್ತರನ್ನು ಕಂಡು ಮಾತನಾಡಿಸಿ ಧೈರ್ಯ ತುಂಬಿದರು.

ರಾಜ್ಯ ಸರ್ಕಾರದ ಅಧೀನದಲ್ಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದವರು ಈ ಫಕ್ಕೀರ್ ಲೆಔಟ್ ಪ್ರದೇಶದಲ್ಲಿ ಕಳೆದ 30-35 ವರ್ಷಗಳಿಂದ ವಾಸವಾಗಿರುವ ದಲಿತ ಹಾಗೂ ಅಲ್ಪಸಂಖ್ಯಾತ ಬಡಜನರ ಮನೆಗಳನ್ನು ಧ್ವಂಸಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಧ್ವಂಸಗೊಳಿಸಿರುವ ಮನೆಗಳನ್ನು ರಾಜ್ಯ ಸರ್ಕಾರ ತಕ್ಷಣ ಮರುನಿರ್ಮಿಸಿ ಸೂಕ್ತ ಪುನರ್ವಸತಿ ಕಲ್ಪಿಸಬೇಕೆಂದು‌ ಎ.ಎ ರಹೀಮ್ ಅವರು ಆಗ್ರಹಿಸಿದರು. ರಾಜ್ಯ ಸರಕಾರ ಕಾಲವಿಳಂಬ ಮಾಡದೇ ಕೂಡಲೇ ಸಂತ್ರಸ್ತರಿಗೆ ಘನತೆಯಿಂದ ಬದುಕಲು ಸೂಕ್ತ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರತೆರನಾದ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ರಾಜ್ಯ ಮುಖಂಡರಾದ ನಿರೇಶಬಾಬು, ಕರ್ನಾಟಕ ಐಟಿ ಯೂನಿಯನ್ ರಾಜ್ಯ ಮುಖಂಡರಾದ ಸೂರಜ್ ನಿಧಿಯಂಗ, ಸುಹಾಸ್ ಅಡಿಗ, ಸಿಪಿಐಎಂ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಮಿತಿ ಸದಸ್ಯರಾದ ಹುಳ್ಳಿ ಉಮೇಶ, ದುಡಿಯುವ ಜನರ ವೇದಿಕೆಯ ನಂದಿನಿ ಮೇಡಂ, ಸಿಪಿಐಎಂ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಸದಸ್ಯರಾದ ಮಂಗಳಕುಮಾರಿ, ಸಿಪಿಐಎಂ ಯಲಹಂಕ ಶಾಖಾ‌ ಕಾರ್ಯದರ್ಶಿಯವರಾದ ಪುಷ್ಪಲತಾ, ಡಿವೈಎಫ್ಐ ಮುಖಂಡರಾದ ಶಿವರಾಜ್, ತನಿಕಾ ಸೇಲಂ, ದುಡಿಯುವ ಜನರ ವೇದಿಕೆಯ ಮುಖಂಡರಾದ ಪೂಜಾ, ಮಾನಸ, ಪ್ರಣೋಯ್, ಫಾತಿಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Siddaramaiah Chief Minister of Karnataka
DK Shivakumar DR. G Parameshwara
DR HC Mahadevappa A A Rahim Himaghnaraj Bhattacharyya DYFI - Democratic Youth Federation of India

#ಕೋಗಿಲುಲೇಔಟ್ #ಬುಲ್ಡೋಜರ್

Want your business to be the top-listed Government Service in Bangalore?

Click here to claim your Sponsored Listing.

Location

Address


No: 12, 2nd Floor, 18th Cross, Sampangiramanagara
Bangalore
560027