ಜೈ ಭೀಮ್ ಬಂಧುಗಳೇ,
ಇಂದು ಮೈಸೂರು ಜಿಲ್ಲೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಸಂವಿಧಾನ ಶಿಲ್ಪಿ , ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ರವರು, ಜೊತೆಗೆ ಉಪಸ್ಥಿತರಿದ್ದ ,ಜಿಲ್ಲಾ ಮುಖಂಡರು ಹಾಗೂ ತಾಲ್ಲೂಕು ಮುಖಂಡರು , ಇಂದು ಸಭೆಯಲ್ಲಿ ಪಾಲ್ಗೊಂಡ ಎಲ್ಲಾರಿಗೂ ರಾಜ್ಯ ಸಮಿತಿ ವತಿಯಿಂದ ಧನ್ಯವಾದಗಳು ಸಲ್ಲಿಸುತ್ತೇವೆ ,
#ಮೈಸೂರು
ಕರ್ನಾಟಕ ಭೀಮ್ ಸೇನೆ (ರಿ)
ಶಂಕರ್ ರಾಮಲಿಂಗಯ್ಯ KBS
Contact information, map and directions, contact form, opening hours, services, ratings, photos, videos and announcements from ಶಂಕರ್ ರಾಮಲಿಂಗಯ್ಯ KBS, Public Service, Jayanagar, Bangalore.
17/05/2025
ಜೈ ಭೀಮ್ ,
ದಿನಾಂಕ 18 .05 .2025 ರಂದು ಬೆಳಗ್ಗೆ 11 .00 ಕ್ಕೆ ಮೈಸೂರು, ಸ್ಥಳ : ಅತಿಥಿ ಗೃಹ ನಜರಾಬಾದ್ ನಲ್ಲಿ ,ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜಯಂತೋತ್ಸವ ಹಾಗು ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಆಯೋಜನೆ ಮಾಡಿರುತ್ತೇವೆ , ಈ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲೆಯ ಎಲ್ಲ ಮುಖಂಡರು ಹಾಗು ತಾಲ್ಲೂಕು ಮುಖಂಡರು ಮತ್ತು ಯುವ ಘಟಕದ ಮುಖಂಡರು ಹಾಗು ಪಧಾದಿಕಾರಿಗಳು ಎಲ್ಲರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಬೇಕೆಂದು ಈ ಮೂಲಕ ತಿಳಿಸುತ್ತೇವೆ ,
ಶಂಕರ್ ರಾಮಲಿಂಗಯ್ಯ
ಸಂಸ್ಥಾಪಕ ರಾಜ್ಯಾಧ್ಯಕ್ಷರು
17/05/2025
ಜೈ ಭೀಮ್ ಬಂಧುಗಳೇ
ಇಂದು ಪಿ ಹರಿಶೇಖರನ್ IPS ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಅಪರಾಧ ಮತ್ತು ತಾಂತ್ರಿಕ ಸೇವೆಗಳು ಇವರನ್ನು ಇಂದು ಭೇಟಿ ಮಾಡಿ , ರಾಮನಗರ ಜಿಲ್ಲೆ , ಬಿಡದಿ ಹೋಬಳಿ , ಭದ್ರಾಪುರ ಗ್ರಾಮದಲ್ಲಿ 14ವರ್ಷದ ಬಾಲಕಿ ಕುಷಿ ಮೇಲೆ ನಡೆದಿರುವ ಅತ್ಯಾಚಾರ ಕೊಲೆ ಘಟನೆ ಖಂಡಿಸಿ , ಕೊಲೆಯಾದ ಹೆಣ್ಣು ಮಗಳಿಗೆ ನ್ಯಾಯ ಕೊಡಿರುವ ನಿಟ್ಟಿನಲ್ಲಿ ಮನವಿ ಸಲ್ಲಿಸಿದ ಸಂದರ್ಭ, ಕರ್ನಾಟಕ ಭೀಮ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರಮಲಿಂಗಯ್ಯ ರವರು, ರಾಜ ಉಪಾಧ್ಯಕ್ಷರಾದ ಡಿ ಕುಮಾರ್ ಅವರು ರಾಜಕಾರ್ಮಿಕ ಘಟಕದ ಕಾರ್ಯದರ್ಶಿಗಳಾದ ರಂಗಸ್ವಾಮಿ ರವರು, ರಾಮನಗರ ಜಿಲ್ಲಾ ಉಪಾಧ್ಯಕ್ಷರಾದ ವಿನೋದ್ ರವರು, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಕಿರಣ್ ಮತ್ತು ಸ್ನೇಹಿತರು , ದಾಸನಪುರ ಹೋಬಳಿ ಅಧ್ಯಕ್ಷರಾದ ಹರೀಶ್ ಅವರು, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಂದೀಪ್ ರವರು, ಬೆಂಗಳೂರು ನಗರ ಮಹಿಳಾ ಅಧ್ಯಕ್ಷರಾದ ವಾಣಿ ರವರು , ಮತ್ತು ಸ್ನೇಹಿತರು ಉಪಸ್ತಿತರಿದ್ದರು ,
16/05/2025
ಜೈ ಭೀಮ್ ಬಂಧುಗಳೇ
ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಬೇಡಿ ಮಾಡಲಿರುವ ಕರ್ನಾಟಕ ಭೀಮ್ ಸೇನೆ ( ರಿ ) ದಿನಾಂಕ 17 .05 .2025ರಂದು , ಸ್ಥಳ : ನೃಪತುಂಗ ರಸ್ತೆ ಬೆಂಗಳೂರು ,
ವಿಷಯ : ರಾಮನಗರ ಜಿಲ್ಲೆ , ಬಿಡದಿ ಹೋಬಳಿ ಭದ್ರಾಪುರ ಕಾಲೋನಿಯ ಖುಷಿ ಎಂಬ ಬುಡಕಟ್ಟು ಅಲೆಮಾರಿ ಸಮುದಾಯದ 14 ವರ್ಷದ ಮಾತು , ಕಿವಿ ಕೇಳಿಸದ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ ಮೃತದೇಹವನ್ನು ರೈಲ್ವೆ ಗೇಟ್ ಬಳಿ ಬಿಸಾಕಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಕಂಡಲ್ಲಿ ಎನ್ಕೌಂಟರ್ ಅಥವಾ ಶೀಘ್ರವೇ ಬಂಧಿಸಿ ಗಲ್ಲಿಗೆ ಹಾಕಬೇಕೆಂದು ಒತ್ತಾಯಿಸಿ ಕರ್ನಾಟಕ ಭೀಮ್ ಸೇನೆ ಸಂಘಟನೆ ಈಗಾಗಲೇ ರಾಜ್ಯವ್ಯಾಪ್ತಿ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದರೆ , ಅದೇ ರೀತಿ , ರಾಜ್ಯ ಸಮಿತಿ ಹಾಗು ನಗರ ಸಮಿತಿ ಮುಖಂಡರು ,
ದಿನಾಂಕ 17 .05 .2025 ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸುತ್ತಿದ್ದೇವೆ , ಬೆಂಗಳೂರಿನಲ್ಲಿರುವ ಎಲ್ಲ ಸಮಾನ ಮನಸ್ಕರಿಗೆ ಭೀಮ ಸ್ವಾಗತ ಕೋರುತ್ತೇನೆ ,
ಶಂಕರ್ ರಾಮಲಿಂಗಯ್ಯ
ಸಂಸ್ಥಾಪಕ ರಾಜ್ಯಾಧ್ಯಕ್ಷರು
ಕರ್ನಾಟಕ ಭೀಮ್ ಸೇನೆ ( ರಿ )
ಜೈ ಭೀಮ್ ಎಂದು ಪ್ರತಿಕ್ರಿಯಿಸಿದ ನೂತನ ಸಿಜೆಐ ಬಿ ಆರ್ ಗವಾಯಿ ರವರು ,
ಸುಪ್ರೀಂ ಕೋರ್ಟ್ ಅವರಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ನಮನ ಸಲ್ಲಿಸಿದ , ಭಾರತ ದೇಶದ 52 ನೇ ಮುಖ್ಯ ನ್ಯಾಯಮೂತಿ೯ ನೂತನ ಸಿಜೆಐ (CJI) ಆಗಿ ಬಿ.ಆರ್. ಗವಾಯಿ ಅವರು ಇಂದು ಅಧಿಕಾರ ಸ್ವೀಕರಿಸಿದರು. ಈ ಮೂಲಕ ಸುಪ್ರೀಂಕೋರ್ಟ್ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ ದೇಶದ ಮೊದಲ ಬೌದ್ಧ ನ್ಯಾಯಾಧೀಶ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕರ್ನಾಟಕ ಭೀಮ್ ಸೇನೆ ಸಂಘಟನೆ ವತಿಯಿಂದ ನೂತನ ಮುಖ್ಯ ನ್ಯಾಯಮೂತಿ೯ ಸಿಜೆಐ (CJI) ಆಗಿ ಬಿ.ಆರ್. ಗವಾಯಿ ರವರಿಗೆ ಅಭಿನಂದನೆಗಳು ಸಲ್ಲಿಸುತ್ತೇವೆ ,
14/05/2025
ಜೈ ಭೀಮ್ ಬಂಧುಗಳೇ
ಕರ್ನಾಟಕ ಭೀಮ್ ಸೇನೆ ಸಂಘಟನೆಯ ದಾರವಾಡ ಜಿಲ್ಲಾಧ್ಯಕ್ಷರು ಹಾಗೂ ವಕೀಲರಾದ ಸ್ವಾಭಿಮಾನಿ ನಾಯಕರಾದ ರಂಗನಾಥ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು,
13/05/2025
ಬಂಧುಗಳೇ
ನಿನ್ನೆ ಬೆಂಗಳೂರಿನ ಬಳಿ ಇರುವ ಬಿಡದಿ ಹತ್ತಿರ ನಡೆದಿರುವ ದುರಂತ ಘಟನೆ ಬಾಳಿ ಬದುಕಬೇಕಾಗಿದ್ದ 14 ವರ್ಷದ ಖುಷಿ ಎಂಬ ಹೆಣ್ಣುಮಗಳನ್ನ ಅನ್ಯಾಯವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿ ರೈಲ್ವೆ ಟ್ರ್ಯಾಕ್ ಪಕ್ಕ ಬಿಸಾಡಿ ಹೋಗಿದ್ದಾರೆ ಕಾಮುಕರು..🤬
ಸದ್ಯಕ್ಕೆ ದೇಶದಲ್ಲಿ ಜಾತಿ, ರಾಜಕೀಯದ ಬಗ್ಗೆ ಇರೋ ಕಾಳಜಿ ಒಂದು ಹೆಣ್ಣಿನ ಮೇಲೆ.. 🤬
ಇಂತಹಾ ಒಂದು ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಿಲ್ಲ ಕಾರಣ ಅವರಿಗೆ ಸಿಗುವುದಿಲ್ಲ..🤬
ಇನ್ನು ರಾಜಕಾರಣಿಗಳಿಗಂತೂ ಈ ವಿಷಯ ಕಿವಿಗೆ ಬಿದ್ದಿರಲ್ಲ
ಯಾಕಂದ್ರೆ ಅವರ ಮನೆ ಮಕ್ಕಳು ಅಲ್ಲ ಹಾಗಾಗಿ..🤬
ದಯಮಾಡಿ , ಕರ್ನಾಟಕ ಭೀಮ್ ಸೇನೆ ರಾಮನಗರ ಜಿಲ್ಲಾ ಸಮಿತಿ ಹಾಗು ರಾಜ್ಯ ಮುಖಂಡರು ಎಲ್ಲರು ಸೇರಿ , ಸಹೋದರಿ ಸಾವಿಗೆ ಕರಣ ಯಾರು ? ಮಾನ್ಯ ಪೊಲೀಸ್ ಅಧಿಕಾರಿಗಳಿಗೆ ಒತ್ತಡ ಹಾಕಿ ಆರೋಪಿಗಳನ್ನು ಪತ್ತೆ ಪಚ್ಚ ಬೇಕೆಂದು ಒತ್ತಾಹಿಸಿ , ಈ ಸಾವಿಗೆ ನಾವೆಲ್ಲರೂ ಸೇರಿ ನ್ಯಾಯ ಕೊಡಿಸೋಣ ,
#ಕರ್ನಾಟಕ_ಭೀಮ್_ಸೇನೆ
ಶಂಕರ್ ರಾಮಲಿಂಗಯ್ಯ
ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಭೀಮ್ ಸೇನೆ
13/05/2025
ನಮಸ್ತೆ...
Click here to claim your Sponsored Listing.
Location
Category
Website
Address
Jayanagar
Bangalore
650082
