BJP Ballari

BJP Ballari

Share

ಭಾರತೀಯ ಜನತಾ ಪಾರ್ಟಿ, ಬಳ್ಳಾರಿ ಜಿಲ್ಲೆ

30/05/2026

ಡಿಕೆ ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರಿನ VLOG..!!

29/05/2026

ಸಿದ್ದರಾಮಯ್ಯ ಹೊರಟರು
ಅಂತಲ್ಲ ಕಣ್ಣೀರು

ಸಚಿವಗಿರಿ ಸಿಗಲ್ಲ ಎಂಬ
ದು:ಖಕ್ಕೆ ಕಣ್ಣೀರಧಾರೆ

29/05/2026

ಕಳೆದ ಮೂರು ವರ್ಷದಿಂದ ಕರ್ನಾಟಕದಲ್ಲಿ ಸೂಪರ್ ಸಿಎಂ ಆಗಿದ್ದವರು K.C. Venugopal ಮತ್ತು Randeep Singh Surjewala ಅವರು. ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಲೂಟಿ ಮಾಡಿದ್ದೇ ಬಹುದೊಡ್ಡ ಸಾಧನೆ ನೋಡಿ.

28/05/2026

ಇನ್ನು ಮುಂದೆ ಕಾಂಗ್ರೆಸ್‌ ಕಾರ್ಯಕರ್ತರ ಪಾಡು

ತೂಕಡಿಸುವ ಮುಖ್ಯಮಂತ್ರಿ ನಿರ್ಗಮನ 😔.
ತೂರಾಡುವ ಮುಖ್ಯಮಂತ್ರಿ ಆಗಮನ

27/05/2026

2014ರ ಕತ್ತಲೆಯಿಂದ ಇಂದಿನ ಜಗತ್ತೇ ಬೆರಗಾಗುವ ಸಾಧನೆಯವರೆಗೆ! ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬದಲಾದ ಭಾರತದ ಅಸಲಿ ತಾಕತ್ತು ಇಲ್ಲಿದೆ ನೋಡಿ!

📱 ಜಗತ್ತಿನ ಒಟ್ಟು ರಿಯಲ್-ಟೈಮ್ ಡಿಜಿಟಲ್ ಪೇಮೆಂಟ್‌ಗಳಲ್ಲಿ ಬರೋಬ್ಬರಿ 49% ಭಾರತದಲ್ಲೇ ನಡೀತಿದೆ! ಯುಪಿಐ ಒಂದರಲ್ಲೇ ವರ್ಷಕ್ಕೆ 24,162 ಕೋಟಿಗೂ ಹೆಚ್ಚು ಟ್ರಾನ್ಸಾಕ್ಷನ್!
🛣️: ದಿನಕ್ಕೆ 34 ಕಿಮೀ ವೇಗದಲ್ಲಿ ಹೈವೇ ನಿರ್ಮಾಣ! ಅಂದು 91k ಕಿಮೀ ಇದ್ದ ನೆಟ್‌ವರ್ಕ್ ಇಂದು 1,46,500 ಕಿಮೀ ದಾಟಿದೆ. ಜೊತೆಗೆ ಸ್ವದೇಶಿ ವಂದೇ ಭಾರತ್ ರೈಲುಗಳ ಹವಾ!
🚀 80+ ದೇಶಗಳಿಗೆ ಮಿಲಿಟರಿ ಹಾರ್ಡ್‌ವೇರ್ ರಫ್ತು, ₹615 ಕೋಟಿಯಲ್ಲಿ ಚಂದ್ರಯಾನ-3 ಯಶಸ್ಸು & 10ನೇ ಸ್ಥಾನದಲ್ಲಿದ್ದ ಎಕಾನಮಿ ಇಂದು ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ.

25/05/2026

ಇಡೀ ಜಗತ್ತೇ ಇಂದು ಅಂತರರಾಷ್ಟ್ರೀಯ ಬಿಕ್ಕಟ್ಟು ಹಾಗೂ ತೈಲ ದರದ ತೀವ್ರ ಏರಿಕೆಯನ್ನು ಎದುರಿಸುತ್ತಿದೆ. ವಿಶ್ವದ ಪ್ರಮುಖ ದೇಶಗಳಲ್ಲೇ ಪೆಟ್ರೋಲ್ ದರ ₹150 ರ ಗಡಿ ದಾಟಿದ್ದರೂ, ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಭಾರತೀಯ ನಾಗರಿಕರ ಮೇಲಿನ ಹೊರೆಯನ್ನು ತಗ್ಗಿಸಲು ನಿರಂತರವಾಗಿ ಶ್ರಮಿಸುತ್ತಿದೆ.

ಜಾಗತಿಕ ಸವಾಲುಗಳ ಈ ಕಠಿಣ ಸಮಯದಲ್ಲಿ, ದೇಶದ ಆರ್ಥಿಕ ಸ್ಥಿರತೆ ಮತ್ತು ಸ್ವಾವಲಂಬನೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ಪರವಾಗಿ, ಬಲಿಷ್ಠ ನಾಯಕತ್ವದ ಪರವಾಗಿ ನಿಲ್ಲಬೇಕಾಗಿದೆ.

ದೇಶ ಮೊದಲು, ದೇಶದ ಹಿತವೇ ಮೊದಲು🇮🇳

25/05/2026

ರಾಜ್ಯದ Indian National Congress - Karnataka ಸರ್ಕಾರದ ತುಷ್ಟೀಕರಣ ನೀತಿಯ ಬೆಂಬಲ ನಮಗಿದೆ ಎಂಬ ಅಹಂಕಾರದಿಂದ ಮತಾಂಧರ ಗುಂಪು ಇಡೀ ರಾಜ್ಯದ ಶಾಂತಿಯನ್ನು ಹರಾಜು ಹಾಕುತ್ತಿದೆ, ಸಮಾಜಘಾತುಕ ಶಕ್ತಿಗಳು ರಾಜಾರೋಷವಾಗಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿವೆ.

ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದಷ್ಟೇ ಅಲ್ಲದೆ, ಕರ್ತವ್ಯ ನಿರತ ಪೊಲೀಸರ ಮೇಲೆಯೇ ಭೀಕರ ಹಲ್ಲೆ ನಡೆಸುವ ಧೈರ್ಯ ಮತಾಂಧರಿಗೆ ಎಲ್ಲಿಂದ ಬಂತು? ಗೃಹಸಚಿವ ಅವರೇ, ರಾಜ್ಯದ ರಕ್ಷಕರಿಗೇ ರಕ್ಷಣೆ ಇಲ್ಲದಂತಾಗಿರುವುದು ನಿಮ್ಮ ಇಲಾಖೆಯ ವೈಫಲ್ಯವಲ್ಲವೇ? ನಿಮ್ಮ ಬೇಜವಾಬ್ದಾರಿತನದಿಂದಾಗಿ ಇಂದು ಭಟ್ಕಳ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಪರಿಸ್ಥಿತಿ ನಿಯಂತ್ರಿಸಬೇಕಾದ ಪೊಲೀಸರ ಮೇಲೆಯೇ ಮಾರಣಾಂತಿಕ ದಾಳಿ ನಡೆಸಿರುವುದು ಅತ್ಯಂತ ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಓಲೈಕೆ ರಾಜಕಾರಣವನ್ನು ಬದಿಗಿಟ್ಟು, ಈ ಮತಾಂಧ ಗಲಭೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ.

25/05/2026

ಹಲೋ.. ಸಿಎಂ Siddaramaiah ಅವರೇ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುತ್ತಿರೋ 5 ಕೆಜಿ ಅಕ್ಕಿ ಮೋದಿ ಸರ್ಕಾರದ್ದು. ಹಾಗಾದ್ರೆ ಕಾಂಗ್ರೆಸ್ ಗ್ಯಾರಂಟಿ ಕೊಟ್ಟಿದ್ದ ಉಳಿದ 5 ಕೆಜಿ ಅಕ್ಕಿ ಎಲ್ಲಿ ಹೋಯ್ತು?

ಚುನಾವಣೆಯಲ್ಲಿ ವೋಟ್ ಬ್ಯಾಂಕ್‌ಗಾಗಿ "ಅನ್ನಭಾಗ್ಯ" ಅಂತ ಅಬ್ಬರದ ಪ್ರಚಾರ ಮಾಡಿದ ಸಿದ್ದರಾಮಯ್ಯ ಸರ್ಕಾರ, ಬಡವರ ತಟ್ಟೆಗೆ ಅನ್ನ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದೆ.


Want your business to be the top-listed Government Service in Bellary?

Click here to claim your Sponsored Listing.

Location

Website

Address


Ballari
Bellary
583102