01/11/2022
Lakshman Gowda
ಕೃಷಿ | ಶಿಕ್ಷಣ | ಉದ್ಯಮ | ಸಮಾಜ ಸೇವೆ
01/11/2022
ಕಷ್ಟ ಕರಗಲಿ_ಬಾಳು ಬೆಳಗಲಿ _ಖುಷಿಯು ಕುಣಿಯುತ್ತಾ ಇರಲಿ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು
ಕಷ್ಟ ಕರಗಲಿ_ಬಾಳು ಬೆಳಗಲಿ _ಖುಷಿಯು ಕುಣಿಯುತ್ತಾ ಇರಲಿ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು
500 ವಿಧ್ಯಾರ್ಥಿಗಳ ಸಹಕಾರದೊಂದಿಗೆ 10000 ಗಿಡಗಳನ್ನು ಒಮ್ಮೆಗೇ ನೆಡುವ ಕಾರ್ಯಕ್ರಮ ವನ್ನು ಎಲ್ ಜಿ ಫೌಂಡೇಷನ್ ಹಾಗೂ ಹೊಸಕೋಟೆ ರೋಟರಿ ಸೆಂಟ್ರಲ್ 3190 ರವರಿಂದ ಆಯೋಜಿಸಲಾಗಿದೆ
21/09/2022
500 ವಿಧ್ಯಾರ್ಥಿಗಳ ಸಹಕಾರದೊಂದಿಗೆ 10000 ಗಿಡಗಳನ್ನು ಒಮ್ಮೆಗೇ ನೆಡುವ ಕಾರ್ಯಕ್ರಮ ವನ್ನು ಎಲ್ ಜಿ ಫೌಂಡೇಷನ್ ಹಾಗೂ ಹೊಸಕೋಟೆ ರೋಟರಿ ಸೆಂಟ್ರಲ್ 3190 ರವರಿಂದ ಆಯೋಜಿಸಲಾಗಿದೆ
ರೋಟರಿ ಹೊಸಕೋಟೆ ಸೆಂಟ್ರಲ್ ನೂತನ ಅಧ್ಯಕ್ಷರಾಗಿ ಎಂ ಲಕ್ಷ್ಮಣ್ ಗೌಡ
ಜವಾಬ್ದಾರಿಯನ್ನು ನಿಷ್ಠೆ-ಪ್ರಾಮಾಣಿಕತೆಯಿಂದ ನಿರ್ವಹಿಸುವೆ
ಹೊಸಕೋಟೆ
ಕಳೆದ ಒಂದು ದಶಕದಿಂದ ತಾವು ಹೊಸಕೋಟೆ ರೋಟರಿ ಸೆಂಟ್ರಲ್ ನಲ್ಲಿ ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಈ ಹಿನ್ನೆಲೆ ಯಲ್ಲಿ 2022-23ರ ಅವಧಿಗೆ ಹೊಸಕೋಟೆ ರೋಟರಿ ಸೆಂಟ್ರಲ್ ಅಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಿದ್ದು, ಇವರುಗಳು ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸುವುದಾಗಿ ನೂತನ ರೋಟರಿ ಅಧ್ಯಕ್ಷ ಎಂ ಲಕ್ಷ್ಮಣ್ ಗೌಡರು ಭರವಸೆ ನೀಡಿದರು.
ಸೋಮವಾರ ಹೊಸಕೋಟೆಯ ಪಟೇಲ್ ನಾರಾಯಣಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಕೇಂದ್ರಬಿಂದುವಾಗಿ ಮಾತನಾಡುತ್ತಾ ತಾವು ಹಲವಾರು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅದೇ ರೀತಿ ಮುಂಬರುವ ದಿನಗಳಲ್ಲಿ ರೋಟರಿ ಮತ್ತು ಎಲ್.ಜಿ. ಫೌಂಡೇಶನ್ ವತಿಯಿಂದ ಹತ್ತು ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲು ತಾವು ಸಿದ್ಧತೆ ನಡೆಸಿದ್ದು, ಅದರಂತೆ ಹೊಸಕೋಟೆ ನಗರದಲ್ಲಿ ಅವಶ್ಯವಿರುವ ಶೌಚಾಲಯಗಳು ತಂಗುದಾಣಗಳು, ಅಂಗವಿಕಲರಿಗೆ ತ್ರಿಚಕ್ರ ವಾಹನಗಳು, ಪರಿಸರ ಸಂರಕ್ಷಣೆಗಾಗಿ ಗಿಡ ನೀಡುವಿಕೆ, ಇನ್ನು ಹತ್ತಾರು ಯೋಜನೆಗಳು ತಮ್ಮ ಜೋಳಿಗೆಯಲ್ಲಿದ್ದು, ಎಲ್ಲರ ಸಹಕಾರ ಮತ್ತು ಪರಿಶ್ರಮದೊಂದಿಗೆ ತಾವು ಸಂಸ್ಥೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಗಮಿತ ಅಧ್ಯಕ್ಷ ವಿಜಯ್ ಕುಮಾರ್, ತಾವು ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಕರೋನಾ ಸಂದರ್ಭದಲ್ಲಿಯೂ ಸಹ ತಾವು ತಮ್ಮ ಕೈಲಾದ ಮಟ್ಟಿಗೆ ಸೇವೆಯನ್ನು ಸಲ್ಲಿಸಿದ್ದು ಈಗ ಉತ್ಸಾಹಿ ಲಕ್ಷ್ಮಣ್ ಗೌಡರು ಅಧ್ಯಕ್ಷರಾಗಿರುವುದು ತಮಗೆ ಸಂತಸ ತಂದಿದೆ ಅವರ ಜೊತೆ ತಾವು ಕೈಜೋಡಿಸಿ ರೋಟರಿ ಸೆಂಟ್ರಲ್ ಅನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಪಿಡಿಜಿ ರೊಟೇರಿಯನ್ ಕೆಪಿ ನಾಗೇಶ್, ಡಿ ಜಿ ಎನ್ ಸತೀಶ್ ಮಾಧವನ್, ಕೋಲಾರ ಜೋನ್ ಗೌರ್ನರ್ ಅ.ಮು. ಲಕ್ಷ್ಮೀನಾರಾಯಣ್, ಚಿತ್ತೂರು ಜೋನ್ ಗೌರ್ನರ್ ರವೀಂದ್ರನಾಥ್, ಅಸಿಸ್ಟೆಂಟ್ ಗೌರ್ನರ್ ನಾಗಶೇಖರ್, ಶಿವಮೂರ್ತಿ, 2022 23ರ ಸಾಲಿನ ಕಾರ್ಯದರ್ಶಿ ವಿ ಸುರೇಶ್ ನಿರ್ದೇಶಕರುಗಳಾದ RTC ಗೋವಿಂದರಾಜು, ಖಜಾಂಚಿ ಭದ್ರಾಚಲ, ನಿಕಟ ಪೂರ್ವ ಕಾರ್ಯದರ್ಶಿ ಡಿಎಸ್ ರಾಜಕುಮಾರ್, ಮಹಿಳಾ ನಿರ್ದೇಶಕರುಗಳಾದ ಶ್ರೀಮತಿ ಲತಾ ಲಕ್ಷ್ಮಣ್ ಗೌಡ್ರು ಇನ್ನು ಮುಂತಾದವರು ಉಪಸ್ಥಿತರಿದ್ದರು.
ಮಾಡುವವ ಒಬ್ಬನಿದ್ದರೆ ಕೇಳುವವರು ಇರಬೇಕು ಎಂಬ ಅರ್ಥದಲ್ಲಿ... ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ಸಮಾಜ ಸೇವಕ ಕರುಣಾಮಯಿ ಲಕ್ಷ್ಮಣ್ ಗೌಡರು.. ಹಾಗು ದಾನಿಗಳು ಸೇರಿ.. ದೊಡ್ಡವಲ್ಲಬಿ ಗ್ರಾಮದಲ್ಲಿ ಚನ್ನಕೇಶವ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡಿದ್ದಾರೆ ... ನೋಡಲು ಎರೆಡು ಕಣ್ಣು ಸಾಲದು... ಲಕ್ಷ್ಮಣ್ ಗೌಡರು ಕೈ ಇಟ್ಟ ಕೆಲಸ ಯಾವತ್ತೂ ಪೂರ್ಣ ವಾಗದೆ ನಿಂತಿಲ್ಲ.. ಆ ಕಾರ್ಯಗಳ ಪಟ್ಟಿಗೆ ಇಂದು ಅವರ ಹುಟ್ಟೂರಾದ ದೊಡ್ಡವಲ್ಲಬಿ ಗ್ರಾಮದ ದೇವಾಲಯ ಸೇರಿ ಕೊಂಡಿದೆ...
ಮಾಡುವವ ಒಬ್ಬನಿದ್ದರೆ ಕೇಳುವವರು ಇರಬೇಕು ಎಂಬ ಅರ್ಥದಲ್ಲಿ... ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ಸಮಾಜ ಸೇವಕ ಕರುಣಾಮಯಿ ಲಕ್ಷ್ಮಣ್ ಗೌಡರು.. ಹಾಗು ದಾನಿಗಳು ಸೇರಿ.. ದೊಡ್ಡವಲ್ಲಬಿ ಗ್ರಾಮದಲ್ಲಿ ಚನ್ನಕೇಶವ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡಿದ್ದಾರೆ ... ನೋಡಲು ಎರೆಡು ಕಣ್ಣು ಸಾಲದು... ಲಕ್ಷ್ಮಣ್ ಗೌಡರು ಕೈ ಇಟ್ಟ ಕೆಲಸ ಯಾವತ್ತೂ ಪೂರ್ಣ ವಾಗದೆ ನಿಂತಿಲ್ಲ.. ಆ ಕಾರ್ಯಗಳ ಪಟ್ಟಿಗೆ ಇಂದು ಅವರ ಹುಟ್ಟೂರಾದ ದೊಡ್ಡವಲ್ಲಬಿ ಗ್ರಾಮದ ದೇವಾಲಯ ಸೇರಿ ಕೊಂಡಿದೆ...
ಸಮಾಜ ಸೇವಕರಾದ ಲಕ್ಷ್ಮಣ್ ಗೌಡರ ಸಮಾಜಮುಖಿ ಸೇವೆಯನ್ನು ಗುರುತಿಸಿ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
Click here to claim your Sponsored Listing.
Location
Category
Contact the business
Telephone
Website
Address
MV Extension
Hoskote
562114
