10/06/2022
ಬೀಜ ಬಿತ್ತೋಣ ಅರಣ್ಯ ಉಳಿಸೋಣ..!
ವಿಶ್ವ ಪರಿಸರ ದಿನದ ಅಂಗವಾಗಿ ಕಾಡಿಗೆ ಹಲವು ಮರಗಳ ಬೀಜಗಳನ್ನು ಬಿತ್ತುವ ಮೂಲಕ ಪರಿಸರ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ನಡೆಸಿ ಸಂತಸಪಟ್ಟೆವು..
RFO ಅಧಿಕಾರಿಯಾದ ಸುರೇಂದ್ರ ಅಣ್ಣ ನವರ ಮಾರ್ಗದರ್ಶನ ಹಾಗೂ IFS ಅಧಿಕಾರಿಗಳು, ನಮ್ಮ ತಂಡದ ಸದಸ್ಯರೆಲ್ಲರೊಡಗೂಡಿ ಹಿರಿಯರು ಕಿರಿಯರೆನ್ನದೆ ನಮ್ಮ ಪಾಲಿನ ಕರ್ಥವ್ಯವನ್ನು ಪ್ರಕೃತಿಯ ಮಡಿಲಿಗೆ ಸಮರ್ಪಸಿದ್ದೇವೆ.
ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು..
22/12/2021
ನಮ್ಮ ಮೈಸೂರು ತಂಡದಿಂದ ಒಂಬತ್ತು ವರ್ಷ ಇರುವಾಗಲೆ ತನ್ನ ತಾಯಿ ಅನ್ನು ಕಳೆದುಕೊಂಡು ಬೀದಿ ಪಾಲಾಗಿ ಅಂದಿನಿಂದ ಇಂದಿನವರೆಗೂ ಬಿಕ್ಷೆ ಬೇಡುತ್ತಾ ಬದುಕುತ್ತಿದ್ದು ಕಣ್ಣು ಕಾಣಿಸದಿರುವ ಅಜ್ಜಿಯು ದೇವಸ್ಥಾನ ಬಳಿ ಉಳಿದುಕೊಂಡಿದ್ದು ಮಲಗಲು ಚಾಪೆ ಹೊದಿಕೆ ಇಲ್ಲದೆ ಪರದಾಡುತ್ತಿದ್ದರು, ಅವರಿಗೆ ನಮ್ಮ ತಂಡದಿಂದ ಚಾಪೆ, ಹೊದಿಕೆ, ಟವೆಲ್, ಪಾತ್ರೆ, ಸೀರೆ ಹಣ್ಣು ಹಂಪಲುಗಳನ್ನು ನೀಡಿ ಧೈರ್ಯ ತುಂಬಿದೆವು.
16/08/2020
ಮೈಸೂರು ಜಿಲ್ಲೆಯ DG ಕೊಪ್ಪಲ್ ನ ಭಾರತಿ ಎಂಬ ಯುವತಿ ಸಮಾಜದ ದೌರ್ಜನ್ಯಕ್ಕೆ ಸಿಲುಕಿ ಮಾನಸಿಕ ಅಸ್ವಸ್ತೆಯಾಗಿ ಮನೆಯವರನ್ನೆಲ್ಲ ಕಳೆದುಕೊಂಡು ರಸ್ತೆಯಲ್ಲಿ ತಿರುಗುತ್ತಾ ಸಿಕ್ಕ ಸಿಕ್ಕ ಕಡೆ ನರಳಾಡಿ ಕೆಲವು ವರ್ಷಗಳಿಂದ ಬದುಕುಳಿದಿದ್ದ ಈ ಅಬಲೆ ಹೆಣ್ಣು ಮಗಳು ಜೀವದ ಕಷ್ಟ ಕೇಳಿಸಿಕೊಳ್ಳುವವರೂ ಸಿಗದೆ ಊಟ ಹಸಿವಿನ ಅರಿವಿಲ್ಲದೇ ಜೀವ ಮತ್ತು ಜೀವನದ ಹಂಗು ತೊರೆದು ಹುಚ್ಚಿಯಾಗಿ ಅಲೆದಾಡುತ್ತಿದ್ದನ್ನು ಕಂಡ ನಮ್ಮ ತಂಡ ಸೂಕ್ತ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಿದಾಗ ಕೋರೋನ ದಿಂದಾಗಿ ಯಾವುದೇ ಆಶ್ರಮಗಳಲ್ಲಿ ಸೇರಿಸಲು ಆಗದೆ ಚರ್ಚೆಯಲ್ಲಿ ಉಳಿದಿತ್ತು ತದ ನಂತರ ಭಾರತಿಯು ಮಳೆಯಲ್ಲೇಲ್ಲಾ ನೆನೆದುಕೊಂಡು ಉಳಿಯಲು ಸ್ಥಳವಿಲ್ಲದೆ ನರಳಾಡುತ್ತಿರುವಿದನ್ನು ಕಂಡ ನಮ್ಮ ತಂಡ ಮತ್ತೆ ಚುರುಕಾಗಿ ಕಾರ್ಯ ನಿರ್ವಹಿಸಿ ಸದಸ್ಯರು ಹಾಗೂ ಸ್ಥಳೀಯರಾದ #ಸ್ವರ್ಣ, #ದಿನೇಶ್, #ಸತೀಶ್, #ನಿತಿನ್, #ನಾಗೇಶ್ ಹೀಗೆ ಹಲವರ ಸಹಾಯದಿಂದ ಕೆಲ ದಿನ ಚಲನ ವಲನಗಳನ್ನು ಪರಿಶೀಲಿಸಿ ಸಂಬಂದಪಟ್ಟವರನ್ನು ಸಂಪರ್ಕಿಸಿ ಸೂಕ್ತ ಸ್ಥಳದಲ್ಲಿ ಆಶ್ರಯ ದೊರಕುವಂತೆ ಮಾಡಲಾಯಿತು.
ಮನೆಯವರನ್ನೆಲ್ಲಾ ಕಳೆದುಕೊಂಡು ಅನಾಥೆಯಂತೆ ಅಲೆದಾಡುತ್ತಿದ್ದ ಈ ಮುಗ್ಧೆಯು ಮರಳಿ ಮೊದಲಿನಂತಾಗಲೆಂದು ದೇವರಲ್ಲಿ ಮೊರೆ ಹೋಗೋಣ, ಸಹಕರಿಸಿದ ತಂಡದ ಸದಸ್ಯರುಗಳೆಲ್ಲರಿಗೂ ಅನಂತ ಧನ್ಯವಾದಗಳು..
ನಮ್ಮ ಕೆಲಸಕ್ಕೆ ನಿಮ್ಮೆಲ್ಲರ ಆಶೀರ್ವಾದ ಸದಾ ಇರಲಿ.
ಇಂತಿ ನಿಮ್ಮ-
( )
#ಸಮಾಜ_ಸೇವೆಗಾಗಿ_ಸ್ನೇಹಿತರ_ಗುಂಪು.
04/04/2020
ಹಸಿದವನಿಗೆ ಚಿನ್ನ ಬೇಡ ಅನ್ನ ಸಿಕ್ಕರೆ ಸಾಕು.. ದಾನದಲ್ಲಿ ಮಹಾದಾನ ಅನ್ನದಾನ. ಹಸಿದವರಿಗೆ ಅನ್ನ ದಾನವೇ ಶ್ರೇಷ್ಟ ಸೇವೆ..!
ನಮ್ಮ ತಂಡದ ಸದಸ್ಯರಾದ #ಸನತ್ ರವರ ನಿಸ್ವಾರ್ಥ ಸೇವೆ ಬಡ ನಿರ್ಗತಿಕರಿಗೆ ವರದಾನ ಮತ್ತು ಸಾಕಷ್ಟು ಸೌಲಬ್ಯ ಕಲ್ಪಿಸುವ ಸರ್ಕಾರಕ್ಕೂ ಹಸಿದವರನ್ನು ಹುಡುಕಿ ಅನ್ನ ನೀಡಲು ಸಾದ್ಯವಾಗದ ದಿಸೆಯಲ್ಲಿ ನಮ್ಮವರ ಕೂಗನ್ನು ನಾವೇ ಕೇಳಬೇಕು..
ಸಮಾಜ ಸೇವೆಗಾಗಿ ಸಮಾಜ ಸೇವಾ ಗುಂಪು
26/03/2020
ನಮ್ಮ ತಂಡದ ಸದಸ್ಯರಾದ #ಚಾಂದ್_ಭಾಷಾ ರವರ ಕಡುಬಡವರಿಗಾಗಿ ಹಸಿದವರಿಗೆ ಅನ್ನ ಕಾರ್ಯಕ್ರಮಕ್ಕೆ ಇನ್ನಷ್ಟು ಹುರುಪು ತುಂಬೋಣ..
ಬಿಕ್ಷಕರು ,ಹುಚ್ಚುರು,ರಸ್ತೆಯಲ್ಲಿ ಇರೋರು ,ಮನೆ ಇಲ್ಲದವರಿಗೆ, ಹಣ ಇಲ್ಲದವರಿಗೆ ಮಾತ್ರ.
ಇವರ ಕರೆ ಸಂಖ್ಯೆ
9686840719
#ಫ್ರೀ_delivery
(ಕುಮಾರ್ ಸ್ವಾಮಿ ಲೇಔಟ್ ಬೆಂಗಳೂರ್ ಸುತ್ತಮುತ್ತಾ 3 ಕಿಲೋ ಮೀಟರ್)
ಇಂದಿರಾ ಕ್ಯಾಂಟೀನ್ ನಿಂದ
13/02/2020
Join with us serve the poor
Friends group for social services