05/01/2023
ಚುನಾವಣೆ - ಅಧಿಕಾರಿಗಳು & ರಾಜಕೀಯ ಪಕ್ಷದ ಪ್ರಮುಖರ ಸಭೆ.
ಮೈಸೂರು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಚುನಾವಣಾ ಉಸ್ತುವಾರಿ ಹಿರಿಯ ಐಎಎಸ್ ಅಧಿಕಾರಿ ಶ್ರೀ ಜಯರಾಮ್ ರಾಜಕೀಯ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆ ಡಿಸಿ ಡಾ. ರಾಜೇಂದ್ರ, ಚುನಾವಣಾಧಿಕಾರಿಗಳು ಹಾಗೂ ಪಕ್ಷದ ಪ್ರಮುಖರು ಬಾಗಿ.
04/01/2023
ಟಿ. ನರಸೀಪುರ ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ. ನಂಜುಂಡಸ್ವಾಮಿಯವರು ಹಾಗೂ ಪುರಸಭೆಯ ಎಲ್ಲಾ ಸದಸ್ಯರು ಬೆಂಗಳೂರಿನ ನಿವಾಸದಲ್ಲಿ ಮಾನ್ಯ ಪ್ರತಿಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ದ್ರುವನಾರಾಯಣ, ಮೈಸೂರು ಡಿಸಿಸಿ ಅಧ್ಯಕ್ಷರಾದ ಡಾ. ಬಿಜೆವಿ ಅವರಿಗೆ ಅಭಿನಂದನೆ ಸಲ್ಲಿಸಿದರು.
02/01/2023
ದಿನಾಂಕ 26.12.2022 ರಂದು ಮೈಸೂರು ಜಿಲ್ಲೆಯಲ್ಲಿ ನಡೆದ ಚುನಾವಣಾ ಸಮಿತಿ ಸಭೆಯ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವರದಿಯನ್ನು ಮಾನ್ಯ ಪ್ರತಿಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರಿಗೆ ಸಲ್ಲಿಸಿದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ. ಬಿಜೆವಿ .....
29/12/2022
ಕಾಂಗ್ರೆಸ್ ಪಕ್ಷದ 137 ನೇ ಸಂಸ್ಥಾಪನಾ ದಿನ.
Indian National Congress Foundation day.
ಮೈಸೂರು ಕಾಂಗ್ರೆಸ್ ಭವಧನದಲ್ಲಿ ಆ ಯೋಜನೆ ಮಾಡಿದ್ದ,
137 ನೇ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಸಂಸ್ಥಾಪನಾ ದಿನದ ಧ್ವಜಾರೋಹಣ ಹಾಗೂ ಗೌರವ ಸಮರ್ಪಣಾ ಸಮಾರಂಭ.
ಕಾಂಗ್ರೆಸ್ ತ್ಯಾಗದ ಸಂಕೇತ :
- ವರದಿ
ಡಿಸಿಸಿ ಮಾಧ್ಯಮ ವಿಭಾಗ
27/12/2022
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.
ಚುನಾವಣಾ ಸಮಿತಿ ಸಭೆ -2023.
ಮೈಸೂರು ಜಿಲ್ಲಾ ಗ್ರಾಮಾಂತರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪ್ರಾಥಮಿಕ ಹಂತದ ಚುನಾವಣಾ ಸಮಿತಿ ಸಭೆಯಲ್ಲಿ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು ಪ್ರತ್ಯೇಕವಾಗಿ ಚುನಾವಣಾ ಸಮಿತಿಗೆ ಮಾಹಿತಿ ನೀಡಿದರು.
- ವರದಿ
ಡಿಸಿಸಿ ಮಾಧ್ಯಮ ವಿಭಾಗ
24/12/2022
ಪೊಲೀಸ್ ಕಾಯ್ದೆ ಬಳಸಿ - ನಿಯಂತ್ರಣ ತುರ್ತು
ಮೈಸೂರು ಹಾಗೂ ರಾಜ್ಯದ ಕೆಲವು ಬಿಜೆಪಿ ಅನಾಗರಿಕ ಪದಾಧಿಕಾರಿಗಳ ಅಸಭ್ಯ ಹಾಗೂ ಅಶಾಂತಿ ನಡೆ ನಿಯಂತ್ರಣಕ್ಕೆ ಪೊಲೀಸ್ ಕಾಯ್ದೆ ಬಳಸುವ ಉದ್ದೇಶಕ್ಕೋಸ್ಕರ ಕಾಂಗ್ರೆಸ್ ನಿಯೋಗ DCP ಅವರೊಂದಿಗೆ ಸಭೆ ನಡೆಸಿತು. ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷರು ಹಾಗೂ ಜಿಲ್ಲೆಯ ಲೀಗಲ್ ವಿಂಗ್ ಅಧ್ಯಕ್ಷರು ಪದಾಧಿಕಾರಿಗಳು ಭಾಗಿ.
20/12/2022
ಪಿರಿಯಾಪಟ್ಟಣ - ಚುನಾವಣೆಗಾಗಿ ಅಡ್ಡದಾರಿ ಹಿಡಿದ JDS!
2023 - ಕ್ಕೆ ಕಾಂಗ್ರೆಸ್ ಗೆಲುವು ಶತ ಸಿದ್ಧ ಎಂದು ತಿಳಿದ JDS : ಕಾಂಗ್ರೆಸ್ ಪದಾಧಿಕಾರಿಗಳನ್ನು FIR ಮೂಲಕಾ ನಿಗ್ರಹ ಮಾಡಲು ಮುಂದಾದ ಸಂದರ್ಭದಲ್ಲಿ ಮಾಜಿ ಮಂತ್ರಿಗಳಾದ ಶ್ರೀ ಕೆ. ವೆಂಕಟೇಶ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಬಿಜೆವಿ Mysore cyber cyber crime ಗೆ ತಾಲೂಕಿನ ಸಮಗ್ರ ಮಾಹಿತಿ ಸಲ್ಲಿಸಿದ್ದಾರೆ.
- ಕಾಂಗ್ರೆಸ್ ಜಗ್ಗುವುದಿಲ್ಲ ಬಗ್ಗುವುದಿಲ್ಲ '
19/12/2022
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ.
ಕ್ಷೇತ್ರದ ಕಂಪಲಾಪುರ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮಂತ್ರಿಗಳಾದ ಶ್ರೀ ಕೆ. ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಬಿಜೆವಿ, ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಶ್ರೀ ಎಚ್. ಡಿ. ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇತರ ಗಣ್ಯರು ಬಾಗಿ.
- ವರದಿ
ಡಿಸಿಸಿ ಮಾಧ್ಯಮ ವಿಭಾಗ
04/12/2022
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.
ವರುಣ ವಿಧಾನಸಭಾ ಕ್ಷೇತ್ರ - ಚುನಾವಣಾ ತಾಲೀಮು.
ಕ್ಷೇತ್ರದ ಬೂತ್ ಲೆವೆಲ್ ಏಜೆಂಟ್ ( BLA ) ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಕ್ಷೇತ್ರದ ಪ್ರಮುಖರೊಂದಿಗೆ ಚುನಾವಣಾ ತಾಲೀಮು ನಡೆಸಲಾಯಿತು.
02/12/2022
ಕಾಂಗ್ರೆಸ್ - ಮೈಸೂರು ಡಿಸಿ ಜೊತೆ ಸಭೆ.
ಜಿಲ್ಲೆಯಲ್ಲಿ 1.45,000 ಮತದಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರು ಕಾಂಗ್ರೆಸ್ ನಿಯೋಗ ಜಿಲ್ಲಾಧಿಕಾರಿಗಳೊಂದಿಗೆ ಸುಧೀರ್ಘವಾಗಿ ಚರ್ಚಿಸಿ ಮರುಪರಿಶೀಲನೆಗೆ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನಿಸಲಾಯಿತು.
29/11/2022
ಮೈಸೂರು ಜಿಲ್ಲಾ ಕಾಂಗ್ರೆಸ್ - ಕಾರ್ಮಿಕ ವಿಭಾಗ.
ವಿಶೇಷ ಕಾರ್ಯಗಾರ.
ಇದೇ ಪ್ರಥಮ ಬಾರಿಗೆ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ, ಕಾರ್ಮಿಕರ ವಿಶೇಷ ಕಾರ್ಯಗಾರ ದಲ್ಲಿ ಹೋರಾಟದ ಕಿಚ್ಚು ಹಚ್ಚಿಸಿದ THE BEST SPEAKERS -
ಯಶಸ್ವಿಗೆ ಧನ್ಯವಾದಗಳು -
ಮಂಜುನಾಥ್ ಕೋಟೆ
ಮೈಸೂರ್ ಡಿಸಿಸಿ - ಕಾರ್ಮಿಕ ವಿಭಾಗ.
29/11/2022
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ.
ಸುಂಡವಾಳು ಗ್ರಾಮದಲ್ಲಿ ಮಾನ್ಯ ಮಾಜಿ ಮಂತ್ರಿಗಳಾದ ಕೆ. ವೆಂಕಟೇಶ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಹಾಗೂ ಕಾರ್ಯಕರ್ತರ ಸಭೆ. ಡಿಸಿಸಿ ಅಧ್ಯಕ್ಷರಾದ ಡಾ. ಬಿಜೆ. ವಿಜಯ್ ಕುಮಾರ್, ತಾಲೂಕು ಕುರುಬ ಸಮಾಜದ ಅಧ್ಯಕ್ಷರಾದ HD. ಗಣೇಶ್ ಹಾಗೂ ಇತರೆ ಪ್ರಮುಖರು ಬಾಗಿ.