15/08/2025
🇮🇳 79ನೇ ಸ್ವಾತಂತ್ರ್ಯ ದಿನಾಚರಣೆ – ರಾಜೀವ್ ನಗರ ಉದ್ಯಾನವನದಲ್ಲಿ ವಿಶೇಷ ಆಚರಣೆ 🌳✨
ಮೈಸೂರು ರಾಜೀವ್ ನಗರದ ಉದ್ಯಾನವನದಲ್ಲಿ ಈ ವರ್ಷದ ಸ್ವಾತಂತ್ರ್ಯ ದಿನವನ್ನು ಆಮ್ ಆದ್ಮಿ ಪಾರ್ಟಿ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.
ಈ ಉದ್ಯಾನವನವು ಹಿಂದೆ ಹಾವು ಮತ್ತು ಇತರೆ ಪ್ರಾಣಿಗಳ ವಾಸಸ್ಥಾನವಾಗಿದ್ದು, ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿತ್ತು.
ಜಿಲ್ಲಾಧ್ಯಕ್ಷ ರಂಗಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕುಲಕರ್ಣಿಯವರ ಸತತ ಪ್ರಯತ್ನದಿಂದ, ಸ್ಥಳೀಯ ಮುಖಂಡರ ಸಹಕಾರದೊಂದಿಗೆ ನಗರಪಾಲಿಕೆ ಆಯುಕ್ತರ ಗಮನಕ್ಕೆ ತಂದು ಉದ್ಯಾನವನವನ್ನು ಸ್ವಚ್ಛಗೊಳಿಸಲಾಯಿತು.
ಇಂದು ಈ ಉದ್ಯಾನವನದಲ್ಲಿ ನಾಗರಿಕರು ಸಂತೋಷದಿಂದ ವಾಕಿಂಗ್ ಮಾಡುತ್ತಿದ್ದಾರೆ, ಮಕ್ಕಳು ಆಟವಾಡುತ್ತಿದ್ದಾರೆ—AAP ಪಕ್ಷದ ನಿಷ್ಠೆ ಮತ್ತು ಸೇವಾ ಮನೋಭಾವದ ಫಲವಾಗಿ.
🎉 ಈ ನೆನಪಿಗಾಗಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು:
🚩 ಧ್ವಜಾರೋಹಣ: ಜಿಲ್ಲಾಧ್ಯಕ್ಷ ರಂಗಯ್ಯ
🙏 ಸ್ವಾಗತ: ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕುಲಕರ್ಣಿ
🌺 ವಂದನಾರ್ಪಣೆ: ಸಂಘಟನಾ ಕಾರ್ಯದರ್ಶಿ ಪ್ರಭಾಕರ್
ಕಾರ್ಯಕ್ರಮದಲ್ಲಿ ಟಿ.ಎಸ್. ವೀರೇಶ್ ಕುಮಾರ್, ಸತೀಶ್ ಭರಣಿ, ಅನಂತ ಸೂರ್ಯ, ಮಿಜಿ೯ ಸಾಹೇಬ್ ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದರು.

15/08/2024
29/04/2024
16/04/2024